Publish Date: Sat, 21 Oct 2023 (10:19 IST)
Updated Date: Sat, 21 Oct 2023 (09:23 IST)
ಬೆಂಗಳೂರು: ಚಂದ್ರಯಾನ 3 ಯಶಸ್ವೀ ಹಾರಾಟದ ನಂತರ ಇಸ್ರೋ ಈಗ ಗಗನಯಾನ ಯೋಜನೆಗೆ ಕೈ ಹಾಕಿತ್ತು. ಆದರೆ ನಿರೀಕ್ಷೆಯಂತೆ ಇಂದು ಪರೀಕ್ಷಾರ್ಥ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 7.30 ಕ್ಕೆ ಗಗನಯಾನ ಪರಿಕ್ಷಾರ್ಥ ಹಾರಾಟ ನಡೆಸಲು ಇಸ್ರೋ ತಯಾರಿ ನಡೆಸಿತ್ತು.
ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ದೋಷದಿಂದಾಗಿ ಹಾರಾಟ ಸ್ಥಗಿತಗೊಳಿಸಲಾಗಿದೆ. ದೋಷ ಪತ್ತೆ ಹಚ್ಚಿ ಸರಿಪಡಿಸಿದ ಬಳಿಕ ಪ್ರಯೋಗ ನಡೆಸಲಾಗುವುದು ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.