Select Your Language

Notifications

webdunia
webdunia
webdunia
webdunia

ಪಕ್ಷಕ್ಕೆ ರಾಜೀನಾಮೆ ನೀಡಿದ ಬಿಜೆಪಿಯ ಮಾಜಿ ಸಚಿವ, ಹಾಲಿ ಶಾಸಕ ಜ್ಞಾನಶ್ಯಾಮ್ ತಿವಾರಿ

ಪಕ್ಷಕ್ಕೆ ರಾಜೀನಾಮೆ ನೀಡಿದ ಬಿಜೆಪಿಯ ಮಾಜಿ ಸಚಿವ, ಹಾಲಿ ಶಾಸಕ ಜ್ಞಾನಶ್ಯಾಮ್ ತಿವಾರಿ
ಜೈಪುರ , ಮಂಗಳವಾರ, 26 ಜೂನ್ 2018 (19:18 IST)
ಜೈಪುರ : ರಾಜಸ್ಥಾನ  ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಆಡಳಿತ ಪಕ್ಷ ಬಿಜೆಪಿಯ ಮಾಜಿ ಸಚಿವ, ಹಾಲಿ ಶಾಸಕ ಜ್ಞಾನಶ್ಯಾಮ್ ತಿವಾರಿ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಸೋಮವಾರ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಜ್ಞಾನಶ್ಯಾಮ್ ತಿವಾರಿ ಅವರು  ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಬಿಜೆಪಿಯಿಂದ ಐದನೇ ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಸಂಗನೇರ್ ಕ್ಷೇತ್ರದ ಹಾಲಿ ಶಾಸಕ ತಿವಾರಿ 60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.  ರಾಜ್ಯದಲ್ಲಿ ಹಿರಿಯ ನಾಯಕರಾಗಿದ್ದ ತಿವಾರಿ ಅವರು ಸಿಎಂ ವಸುಂಧರಾ ರಾಜೆ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ ಎನ್ನಲಾಗಿದೆ. ಹಾಗೇ ಪಕ್ಷಕ್ಕೆ ರಾಜೀನಾಮೆ ನೀಡಿದ ಅವರು ತಮ್ಮ ಮಗ ಅಖಿಲೇಶ್ ಸ್ಥಾಪಿಸಿರುವ ಭಾರತ್ ವಾಹಿನಿ ಪಾರ್ಟಿಗೆ ಸೇರಲಿದ್ದಾರೆ ಎಂದು ಹೇಳಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗುವಿನ ಜೀವಂತ ಸಮಾಧಿಗೆ ಯತ್ನ!