Select Your Language

Notifications

webdunia
webdunia
webdunia
webdunia

ಪವನ್ ಕಲ್ಯಾಣ್‌ರನ್ನು ಸೋಲಿಸಲು ವಿಫಲ: ಹೆಸರು ಬದಲಿಸಿಕೊಂಡ ವೈಎಸ್‌ಆರ್‌ ನಾಯಕ

Pawan Kalyan

Sampriya

ಹೈದರಾಬಾದ್‌ , ಶುಕ್ರವಾರ, 21 ಜೂನ್ 2024 (14:05 IST)
Photo Courtesy X
ಹೈದರಾಬಾದ್‌: ಜನಸೇನಾ ನಾಯಕ, ನಟ ಪವನ್‌ ಕಲ್ಯಾಣ್‌ ಅವರನ್ನು ವಿಧಾನಸಭೆಯಲ್ಲಿ ಸೋಲಿಸಲು ವಿಫಲವಾದ ಹಿನ್ನೆಲೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಮುಖಂಡ ಮುದ್ರಗಡ ಪದ್ಮನಾಭಂ ಅವರು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಂತೆ, ಜನಸೇನಾ ನಾಯಕ ಪವನ್‌ ಕಲ್ಯಾಣ್‌ ಅವರನ್ನು ಸೋಲಿಸಲಾಗದ್ದಕ್ಕೆ ಹೆಸರು ತನ್ನ ಹೆಸರನ್ನು ಮುಂದೆ ಪದ್ಮನಾಭ ರೆಡ್ಡಿ ಎಂದು ಅವರು ಬದಲಿಸಿಕೊಂಡಿದ್ದಾರೆ.

ಪವನ್‌ ಕಲ್ಯಾಣ್‌ ಅವರು ಪಿತಾಪುರಂ ವಿಧಾನಸಭೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದರು. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ವಂಗಾ ಗೀತಾ ವಿಶ್ವನಾಥ್‌ ವಿರುದ್ಧ 70 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದರು.

ಹೆಸರು ಬದಲಿಸಿಕೊಳ್ಳುವಂತೆ ಯಾರೂ ಮೇಲೆ ಒತ್ತಡ ಹೇರಿಲ್ಲ. ನಾನಾಗಿಯೇ ಹೆಸರು ಬದಲಿಸಿಕೊಂಡಿದ್ದೇನೆ ಎಂದು ರೆಡ್ಡಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ಆದಾಗ್ಯೂ, ಪವನ್‌ ಕಲ್ಯಾಣ್‌ ಅವರ ಅಭಿಮಾನಿಗಳು ತಮ್ಮನ್ನು ನಿಂದಿಸಿರುವುದಾಗಿ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಘಟಾನುಘಟಿಗಳಿಗೆ ಜಾಮೀನು ಕೊಡಿಸಿದ್ದ ವಕೀಲ ಸಿವಿ ನಾಗೇಶ್ ಗೆ ಈಗ ದರ್ಶನ್ ಕಾಪಾಡುವ ಹೊಣೆ