Select Your Language

Notifications

webdunia
webdunia
webdunia
webdunia

ಆನೆಗಳನ್ನು ಆತಂಕವಾದಿಯಂತೆ ಬಿಂಬಿಸಬೇಡಿ: ಅರಣ್ಯ ಇಲಾಖೆ ಸೂಚನೆ

ಆನೆಗಳನ್ನು ಆತಂಕವಾದಿಯಂತೆ ಬಿಂಬಿಸಬೇಡಿ: ಅರಣ್ಯ ಇಲಾಖೆ ಸೂಚನೆ
ಬೆಂಗಳೂರು , ಬುಧವಾರ, 29 ಸೆಪ್ಟಂಬರ್ 2021 (13:22 IST)
ಬೆಂಗಳೂರು : ಹಿಂದಿ ಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಆನೆಗಳ ಮೇಲೆ ಕೆಟ್ಟ ಭಾಷೆಯನ್ನು ಪ್ರಯೋಗಿಸುತ್ತಿರುವುದನ್ನು ಗಮನಿಸಿರುವ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಈ ಬಗ್ಗೆ ಮಾಧ್ಯಮಗಳಿಗೆ ಸೂಚನೆ ನೀಡಿದೆ.
Photo Courtesy: Google

ಆನೆಗಳ ಕುರಿತಾದ ಬಹುತೇಕ ಸುದ್ದಿಗಳಲ್ಲಿ ಆನೆಗಳನ್ನು ಉಲ್ಲೇಖಿಸುವಾಗ ಪ್ರಚೋದನಕಾರಿಯಾದ ಪದಗಳ ಬಳಕೆ ಮಾಡಿರುವುದನ್ನು ಇಲಾಖೆ ಪ್ರಶ್ನಿಸಿದೆ. ಈ ರೀತಿ ಆನೆಗಳ ಬಗ್ಗೆ ಕೆಟ್ಟ ಭಾವನೆ ಮೂಡುವಂತೆ ಬರೆಯುವುದರಿಂದ ಸಾರ್ವಜನಿಕರಲ್ಲಿ ಆನೆಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ ಎಂದು ವನ್ಯಜೀವಿ ತಜ್ಞರು ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು.
ಹಿಂದಿ ಮಾಧ್ಯಮಗಳಲ್ಲಿ ಆನೆಗಳನ್ನು ಆತಂಕವಾದಿ, ಉತ್ಪಾತಿ, ಹಿಂಸಾವಾದಿ, ಕೊಲೆಗಾರ ಎಂಬಿತ್ಯಾದಿ ಪದಗಳಿಂದ ವರ್ಣಿಸಿದ್ದವು. ಈ ಕುರಿತಾದ ಪತ್ರಿಕೆ ಸುದ್ದಿಗಳು ಮತ್ತು ಎಲೆಕ್ಟ್ರಾನಿಕ್ ಮೀಡಿಯಾ ವರದಿ ಪ್ರತಿಗಳನ್ನು ವನ್ಯಜೀವಿ ತಜ್ಞ ನಿತಿನ್ ಸಿಂಘ್ವಿ ಎಂಬುವವರು ಪರಿಸರ ಮತ್ತು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಎರಡು ದೇಶಗಳ ನಡುವೆ ವಿಮಾನಯಾನವನ್ನು ಪುನರಾರಂಭಿಸುವಂತೆ ಭಾರತಕ್ಕೆ ಪತ್ರ ಬರೆದ ತಾಲಿಬಾನ್