Select Your Language

Notifications

webdunia
webdunia
webdunia
webdunia

ದಯವಿಟ್ಟು ನನ್ನನ್ನ ಬಿಟ್ಟುಬಿಡಿ, ಕೋಪದಲ್ಲಿ ಏನೋ ಮಾತಾಡಿದ್ರೆ ಸುದ್ದಿ ಮಾಡ್ತೀರಾ..?: ಡಿಕೆಶಿ ತಾಯಿ ಗೌರಮ್ಮ

ದಯವಿಟ್ಟು ನನ್ನನ್ನ ಬಿಟ್ಟುಬಿಡಿ, ಕೋಪದಲ್ಲಿ ಏನೋ ಮಾತಾಡಿದ್ರೆ ಸುದ್ದಿ ಮಾಡ್ತೀರಾ..?: ಡಿಕೆಶಿ ತಾಯಿ ಗೌರಮ್ಮ
ಬೆಂಗಳೂರು , ಭಾನುವಾರ, 6 ಆಗಸ್ಟ್ 2017 (16:29 IST)
ದಯವಿಟ್ಟು ನನ್ನನ್ನ ಬಿಟ್ಟುಬಿಡಿ, ಕೋಪದಲ್ಲಿ ಏನೋ ಮಾತಾಡಿದರೆ ಅದನ್ನೇ ಸುದ್ದಿ ಮಾಡುತ್ತೀರಾ ಎಂದು ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಮಾಧ್ಯಮದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಐಟಿ ದಾಳಿ ಸಂದರ್ಭ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ ಶಾ ಜೊತೆ ಕಾಂಗ್ರೆಸ್ ನಾಯಕರ ಬಗ್ಗೆಯೂ  ಡಿ.ಕೆ. ಶಿವಕುಮಾರ್ ಅವರ ತಾಯಿ ಗೌರಮ್ಮ ಕಿಡಿ ಕಾರಿದ್ದರು. ಬಿಜಪಿಯವರು, ನಮ್ಮವರು ಎಲ್ಲರೂ ಸೇರಿಕೊಂಡು ಐಟಿ ದಾಳಿ ನಡೆಸಿದ್ದಾರೆ ಎಂದು ಕೋಪ ತೋಡಿಕೊಂಡಿದ್ದರು. ಬಳಿಕ ಸ್ವತಃ ಡಿ.ಕೆ. ಶಿವಕುಮಾರ್ ಸಿಎಂ ಬಳಿ ಕ್ಷಮೆ ಕೋರಿದ್ದಾರೆಂದು ವರದಿಯಾಗಿತ್ತು.

ಇದೀಗ, ಮತ್ತೆ ಮಾಧ್ಯಮದವರು ಗೌರಮ್ಮನವರನ್ನ ಮಾತನಾಡಿಸಲು ಮುಂದಾದಾಗ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಂಸದ ಡಿ.ಕೆ. ಸುರೇಶ್ ಸಹ ತಾಯಿ ಬಾಯಿ ತಪ್ಪಿ  ನರೇಂದ್ರಮೋದಿ ಹೆಸರನ್ನ ಹೇಳಲು ಹೋಗಿ ಸಿದ್ದರಾಮಯ್ಯನವರ ಹೆಸರು ಹೇಳಿದ್ದಾರೆ ಎಂದು ಸಮರ್ಥನೆ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

`ನನ್ನ ಜೊತೆ ಅಡ್ಜಸ್ಟ್ ಆಗದಿದ್ದರೆ ಇಂಟರ್ನಲ್ ಮಾರ್ಕ್ ಕಟ್’