Select Your Language

Notifications

webdunia
webdunia
webdunia
webdunia

ರಾಷ್ಟ್ರಲಾಂಛನ ನಿರ್ಮಾತೃನ ನಿರ್ಗಮನ

ರಾಷ್ಟ್ರಲಾಂಛನ ನಿರ್ಮಾತೃನ ನಿರ್ಗಮನ
ಇಂದೋರ್‌ , ಮಂಗಳವಾರ, 27 ಡಿಸೆಂಬರ್ 2016 (09:45 IST)
ನಮ್ಮ ರಾಷ್ಟ್ರಲಾಂಛನವನ್ನು ವಿನ್ಯಾಶಗೊಳಿಸಿದ್ದ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದ ದೀನನಾಥ್ ಭಾರ್ಗವ್ ಹೃದಯ ಸಂಬಂಧಿ ಕಾಯಿಲೆಯಿಂದ ಭಾನುವಾರ ಇಂದೋರ್‌ನಲ್ಲಿ ಸಾವನ್ನಪ್ಪಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ಸಾರನಾಥನ ಸಿಂಹಬೋದಿಗೆ ಅಶೋಕ ಚಕ್ರವನ್ನು ವಿನ್ಯಾಶಗೊಳಿಸಿದ್ದ ದೀನನಾಥ್ ಇಬ್ಬರು ಪುತ್ರಿಯರು ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
 
1927 ನವೆಂಬರ್ 1 ರಂದು ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಮುಲ್ತಾಯಿಯಲ್ಲಿ ಜನಿಸಿದ್ದ ಅವರು ರಚಿಸಿದ್ದ ರಾಷ್ಟ್ರೀಯ ಲಾಂಛನವನ್ನು 1950 ಜನವರಿ 2 ರಂದು ಅಧಿಕೃತವಾಗಿ ಬಳಸಿಕೊಳ್ಳಲಾಗಿತ್ತು.
 
ಭಾರತ ಸಂವಿಧಾನದ ಕರಡು ಪ್ರತಿಯ ಪುಟ ವಿನ್ಯಾಶಗೊಳಿಸುವ ತಂಡದಲ್ಲಿ ಕೂಡ ಅವರಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ: ತಪ್ಪಿದ ಭಾರಿ ವಿಮಾನ ದುರಂತ