ಮದುವೆಯಾಗಿ 11 ವರ್ಷವಾದರೂ ಫಸ್ಟ್ ನೈಟ್ ಭಾಗ್ಯ ಕೂಡಿ ಬಂದಿಲ್ಲ! ಮುಂದೇನಾಯ್ತು?

Webdunia
ಗುರುವಾರ, 6 ಜನವರಿ 2022 (09:52 IST)
ರಾಯ್ಪುರ : ಮದುವೆಯೆಂದರೆ ಎರಡು ಮನಸುಗಳನ್ನು, ಎರಡು ಕುಟುಂಬಗಳನ್ನು ಬೆಸೆಯುವ ನಂಟು. ಆದರೆ, ಛತ್ತೀಸ್ಗಢದ ದಂಪತಿಯ ಕತೆಯೇ ಬೇರೆ.

ಮದುವೆಯಾಗಿ 11 ವರ್ಷ ಕಳೆದರೂ ಅವರಿಬ್ಬರೂ ಒಟ್ಟಿಗೇ ಸಂಸಾರ ಮಾಡಲು ಒಳ್ಳೆಯ ಮುಹೂರ್ತವೇ ಸಿಕ್ಕಿಲ್ಲ. ಹೀಗಾಗಿ, ಇನ್ನು ಮುಂದೂ ಆ ‘ಮುಹೂರ್ತ’ ಕೂಡಿಬರಲು ಸಾಧ್ಯವೇ ಇಲ್ಲ ಎಂದು ನಿರ್ಧರಿಸಿದ ಗಂಡ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ.

ಈ ವಿಚಿತ್ರವಾದ ಸಮಸ್ಯೆಯನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೂ ಆಘಾತವಾಗಿದ್ದು, ಆ ಗಂಡನಿಗೆ ಮದುವೆಯಿಂದ ಹಾಗೂ ಹೆಂಡತಿಯಿಂದ ಮುಕ್ತಿ ಕೊಡಿಸಿದ್ದಾರೆ.

ಹಿಂದೂ ಧರ್ಮದಲ್ಲಿ ಮದುವೆ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲದೆ ಪ್ರಸ್ಥಕ್ಕೂ ಮುಹೂರ್ತ ನೋಡುವ ಪದ್ಧತಿ ಕೆಲವು ಕಡೆಯಿದೆ. 11 ವರ್ಷಗಳ ಹಿಂದೆ ಮದುವೆಯಾಗಿದ್ದ ಛತ್ತೀಸ್ಗಢದ ದಂಪತಿಗೆ ಮೊದಲ ರಾತ್ರಿಗೆ ಇದುವರೆಗೂ ಶುಭ ಮುಹೂರ್ತ ಸಿಗಲೇ ಇಲ್ಲ. ಹೀಗಾಗಿ, ಆ ಮಹಿಳೆಯ ಮನೆಯವರು ತಮ್ಮ ಮಗಳನ್ನು ಗಂಡನ ಮನೆಗೆ ಕಳುಹಿಸಲೇ ಇಲ್ಲ. ಬರೋಬ್ಬರಿ 11 ವರ್ಷ ಹೆಂಡತಿಗಾಗಿ ಕಾದ ಗಂಡ ಕೊನೆಗೆ ಬೇಸತ್ತು ಇದೀಗ ಡೈವೋರ್ಸ್ ಪಡೆದಿದ್ದಾನೆ

ಈ ವಿಚಿತ್ರ ಪ್ರಕರಣದ ವಿಚಾರಣೆ ನಡೆಸಿದ ಛತ್ತೀಸ್ಗಢ ಹೈಕೋರ್ಟ್, ಶುಭ ಮುಹೂರ್ತವೆಂಬುದು ಕುಟುಂಬದಲ್ಲಿ ಸಂತೋಷವಾಗಿರಲು ಮುಖ್ಯವಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಹೆಂಡತಿ ತನ್ನ ಗಂಡನ ಜೊತೆ ಬಾಳಲು ಮತ್ತು ಗಂಡನ ಮನೆಗೆ ಹೋಗದಂತೆ ಈ ಶುಭ ಮುಹೂರ್ತ ಅಡ್ಡಿಯಾಗಿದೆ.

ಇದನ್ನೇ ಮುಂದಿಟ್ಟುಕೊಂಡು 11 ವರ್ಷಗಳ ದಾಂಪತ್ಯ ಜೀವನದಿಂದ ಗಂಡ-ಹೆಂಡತಿಯಿಬ್ಬರೂ ದೂರ ಉಳಿದಿದ್ದಾರೆ. ಹೀಗಾಗಿ, ಹಿಂದೂ ವಿವಾಹ ಕಾಯ್ದೆಯಡಿ ಈ ಮದುವೆಯನ್ನು ಅನುರ್ಜಿತಗೊಳಿಸಲಾಗಿದೆ ಎಂದು ಹೇಳಿದೆ.

ಪ್ರಕರಣ ಹಾಗೂ ಕಾರಣವೆಂದು ಪರಿಗಣಿಸಿದ ಹೈಕೋರ್ಟ್ ವಿಚ್ಛೇದನಕ್ಕೆ ಅಸ್ತು ಎಂದಿದೆ. ಹೆಂಡತಿ ತನ್ನ ಗಂಡನೊಂದಿಗೆ 11 ವರ್ಷದಿಂದ ದೂರವೇ ಇರುವುದರಿಂದ ಈ ಮದುವೆಯನ್ನು ಅಮಾನ್ಯಗೊಳಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments