Select Your Language

Notifications

webdunia
webdunia
webdunia
webdunia

ಮತ್ತೊಂದು ಗುದ್ದೋಡು ಪ್ರಕರಣ: ಬಾಲಕ ದುರ್ಮರಣ

ಮತ್ತೊಂದು ಗುದ್ದೋಡು ಪ್ರಕರಣ: ಬಾಲಕ ದುರ್ಮರಣ
ನವದೆಹಲಿ , ಸೋಮವಾರ, 6 ಮಾರ್ಚ್ 2017 (11:54 IST)
ನವದೆಹಲಿಯಲ್ಲಿ ಮತ್ತೊಂದು ಗುದ್ದೋಡು ಪ್ರಕರಣ ನಡೆದಿದ್ದು ವೇಗವಾಗಿ ಬಂದ ಮರ್ಸಿಡಿಸ್‌ಗೆ ಯುವಕ ಬಲಿಯಾಗಿದ್ದಾನೆ. 

ದೆಹಲಿಯ ಪಶ್ಚಿಮ ವಿಹಾರದಲ್ಲಿ ಭಾನುವಾರ ರಾತ್ರಿ 11ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ವೇಗವಾಗಿ ಬಂದ ಮರ್ಸಿಡಿಸ್ ಸ್ಕೂಟಿ ಸವಾರನ ಮೇಲೆ ಹರಿದು ಹೋಗಿದೆ. ಮೃತನನ್ನು ಅತುಲ್ ಅರೋರಾ ಎಂದು ಗುರುತಿಸಲಾಗಿದ್ದು, ಆತ 11 ನೇ ತರಗತಿಯಲ್ಲಿ ಓದುತ್ತಿದ್ದ. 
 
ಘಟನೆಯ ಬಳಿಕ ಅಪಘಾತ ಎಸಗಿದ್ದ ಮರ್ಸಿಡಿಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. 
 
ಘಟನಾ ಸ್ಥಳದ ಸುತ್ತಮುತ್ತಲಿನ ಕಟ್ಟಡಗಳಲ್ಲಿ ಅಳವಡಿಸಲಾಗಿರುವ ಸಿಸಿ ಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. 
 
ಮರ್ಸಿಡಿಸ್ ವಾಹನದ ವೇಗವೇ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನುಗು ಬೆಕ್ಕಿಗಾಗಿ ಟಿಟಿಡಿ ಮತ್ತು ಅರಣ್ಯ ಇಲಾಖೆ ಗುದ್ದಾಟ