Webdunia - Bharat's app for daily news and videos

Install App

ಎಂತಾ ಕಾಲ ಬಂತಪ್ಪಾ: 4 ವರ್ಷದ ಬಾಲಕನ ವಿರುದ್ಧ ರೇಪ್ ಕೇಸ್ ದಾಖಲು

Webdunia
ಗುರುವಾರ, 23 ನವೆಂಬರ್ 2017 (15:30 IST)
ದೆಹಲಿಯ ದ್ವಾರಕಾದಲ್ಲಿರುವ ಮ್ಯಾಕ್ಸ್‌ಫೋರ್ಟ್ ಶಾಲೆಯ ಆವರಣದಲ್ಲಿ ಸಹಪಾಠಿಗೆ ಲೈಂಗಿಕ ಕಿರುಕುಳ ನೀಡಿದ   ಆರೋಪದ ಮೇಲೆ ನಾಲ್ಕು ವರ್ಷ ವಯಸ್ಸಿನ ಬಾಲಕನ ವಿರುದ್ಧ ಕೇಸ್ ದಾಖಲಾಗಿದೆ.
 
ಪೋಷಕರ ದೂರಿನ ಪ್ರಕಾರ, ಬಾಲಕಿ ಶಾಲೆಯಿಂದ ಮನೆಗೆ ಬಂದ ಕೂಡಲೇ ಗುಪ್ತಾಂಗದಲ್ಲಿ  ನೋವಾಗಿದೆ ಎಂದು ದೂರಿದ್ದಾಳೆ. ಮಾರನೇ ದಿನ ಮೌನ ಮುರಿದು ನಡೆದ ಘಟನೆಯನ್ನು ವಿವರಿಸಿದ್ದಾಳೆ.
 
ಶಾಲೆಯಲ್ಲಿ ನಡೆದ ಘಟನೆಯ ಬಗ್ಗೆ ಬಾಯಿಬಿಟ್ಟ ಬಾಲಕಿ ತನ್ನ ಸಹಪಾಠಿಯಾಗಿರುವ ಬಾಲಕನೊಬ್ಬ ಪ್ಯಾಂಟ್‌ ಬಿಚ್ಚಿ, ತನ್ನ ಗುಪ್ತಾಂಗದಲ್ಲಿ ಬೆರಳು ತೂರಿಸಿದ್ದಾನೆ ಎಂದು ತಿಳಿಸಿದ್ದಾಳೆ. 
 
ಬಾಲಕಿ ಅವನನ್ನು ದೂರ ತಳ್ಳಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಹತ್ತಿರ ಯಾವುದೇ ಸಿಬ್ಬಂದಿಯಿಲ್ಲದ ಕಾರಣ ಇತರರ ನೆರವು ಕೇಳಲು ಸಾಧ್ಯವಾಗಲಿಲ್ಲ ಎಂದು ಮಾಹಿತಿ ನೀಡಿದ್ದಾಳೆ. 
 
ಶಾಲೆಯ ಶಿಕ್ಷಕಿ ಮತ್ತು ಸಂಚಾಲಕರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಾಲಕಿಯ ಪೋಷಕರು, ಶಾಲೆಯ ಪ್ರಾಂಶುಪಾಲ ಆರೋಪಿ ವಿದ್ಯಾರ್ಥಿಯ ವಿವರಗಳನ್ನು ಕೂಡಾ ನೀಡಲು ನಿರಾಕರಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ರಾಕ್‌ಲಾಂಡ್ ಆಸ್ಪತ್ರೆಯ ವೈದ್ಯರು ಬಾಲಕಿಯ ಪರೀಕ್ಷೆ ನಡೆಸಿದಾಗ ಲೈಂಗಿಕ ದೌರ್ಜನ್ಯವಾಗಿರುವುದು ಸಾಬೀತಾಗಿದೆ. ನಂತರ ಪೋಷಕರು ಬಾಲಕನ ವಿರುದ್ಧ ದ್ವಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ: ಸಿದ್ದರಾಮಯ್ಯ

Mangaluru Suhas Shetty murder: ಸುಹಾಸ್ ಶೆಟ್ಟಿ ಕುಟುಂಬಸ್ಥರ ಭೇಟಿ ಮಾಡಿ 25 ಲಕ್ಷ ರೂ ಪರಿಹಾರ ಭರವಸೆ ಕೊಟ್ಟ ವಿಜಯೇಂದ್ರ

ಸುಹಾಸ್ ಶೆಟ್ಟಿ ಮೃತದೇಹದ ಮೆರವಣಿಗೆ ವೇಳೆ ಎದುರು ಬಂದ ರಿಕ್ಷಾದ ಗತಿ ನೋಡಿ, Video Viral

ಪವನ್ ಕಲ್ಯಾಣ್ ಸಮಸ್ಯೆಗೆ ವೇದಿಕೆಯಲ್ಲೇ ಔಷಧಿ ಕೊಟ್ಟ ನರೇಂದ್ರ ಮೋದಿ, ವಿಡಿಯೋ ವೈರಲ್‌

ಸ್ಪೀಕರ್‌ ಯು.ಟಿ. ಖಾದರ್‌ ಬೆನ್ನಲ್ಲೇ ಸಿದ್ದರಾಮಯ್ಯಗೆ ಬೆದರಿಕೆ ಕರೆ: ಕ್ರಮಕ್ಕೆ ಪೊಲೀಸರಿಗೆ ಸಿಎಂ ಸೂಚನೆ

ಮುಂದಿನ ಸುದ್ದಿ