ಪಾಪ ಮಾಡಿದ್ರೆ ಕ್ಯಾನ್ಸರ್ ಬರುತ್ತೆ!

Webdunia
ಗುರುವಾರ, 23 ನವೆಂಬರ್ 2017 (14:26 IST)
ಗುವಾಹಟಿ: 'ಪಾಪ ಮಾಡಿದ್ದರೆ ಕ್ಯಾನ್ಸರ್ ಬರುತ್ತದೆ' ಇದನ್ನು ಯಾರೋ ಜ್ಯೋತಿಷಿ ಹೇಳುತ್ತಿದ್ದಾರೆ ಅಂದುಕೊಳ್ಳಬೇಡಿ. ಹೀಗೆ ಹೇಳಿದ್ದು ಅಸ್ಸಾಂನ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಸರ್ಮಾ. ಹೊಸತಾಗಿ ಉದ್ಯೋಗಕ್ಕೆ ಸೇರಿದ ಶಾಲಾಶಿಕ್ಷಕರನ್ನು ಉದ್ದೇಶಿಸಿ ಸಚಿವರು ಮಾತನಾಡಿದ್ದಾರೆ.


ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಪಾಪ. ದೇವರ ನ್ಯಾಯಾಲಯದಲ್ಲಿ ಎಲ್ಲರಿಗೂ ಶಿಕ್ಷೆಯಾಗುತ್ತದೆ. ಈ ಶಿಕ್ಷೆಯ ಫಲವಾಗಿ ಕೆಲವರಿಗೆ ಕ್ಯಾನ್ಸರ್ ಬರುತ್ತದೆ. ಇನ್ನು ಕೆಲವರು ಆಕ್ಸಿಡೆಂಟ್ ಆಗಿ ಸಾಯುತ್ತಾರೆ ಇದೆಲ್ಲವೂ ಅವರವರು ಮಾಡಿದ ಪಾಪದ ಫಲ ಎನ್ನುತ್ತಾರೆ ಸಚಿವ ಹಿಮಾಂತ ಬಿಸ್ವಾ.


ಬಿಸ್ವಾ ಅವರ ಈ ರೀತಿಯ ಹೇಳಿಕೆಯನ್ನು ಎಐಯುಡಿಎಫ್ ವಕ್ತಾರ ಇಮಿನುಲ್ ಇಸ್ಲಾಂ ಖಂಡಿಸಿದ್ದಾರೆ. ತಂತ್ರಜ್ಞಾನದ ಯುಗ ದಲ್ಲಿ ಬಿಸ್ವಾ ಅವರು ಈ ರೀತಿ ಹೇಳಿಕೆ ನೀಡುವುದು ಹಾಸ್ಯಾಸ್ಪದವಾಗಿದೆ. ಕೆಲವು ವರ್ಷಗಳ ಹಿಂದೆಯೇ ಸಚಿವರು ಕ್ಯಾನ್ಸರ್ ತಡೆಗಟ್ಟಲು ತಂಬಾಕು ನಿಷೇಧ ಕಾನೂ ತಂದಿದ್ದರು. ಈಗ ಬೇರೊಂದು ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕ್ಯಾನ್ಸರ್ ಪೀಡಿತರಿಗೆ ನೋವಾಗುತ್ತದೆ ಎಂದು ಇಮಿನುಲ್ ಇಸ್ಲಾಂ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಸ್ ನಡಿಗೆ ಸಿಲುಕಲಿದ್ದ ಮಗು ಜಸ್ಟ್ ಮಿಸ್: ಎದೆ ಝಲ್ಲೆನಿಸುವ ಘಟನೆಯ ವಿಡಿಯೋ

ಯುರೋಪಿಯನ್ ಒಕ್ಕೂಟದ ಜೊತೆ ಒಪ್ಪಂದ ಬೆನ್ನಲ್ಲೇ ಭಾರತಕ್ಕೆ ಸುಂಕ ಕಡಿಮೆ ಮಾಡಿದ ಅಮೆರಿಕಾ

ರಂಜಾನ್ ಹಬ್ಬದ ಹಿನ್ನಲೆಯಲ್ಲಿ ಶಾಲೆ ಸಮಯವೇ ಬದಲು: ಹಿಂದೂಗಳಿಂದ ಆಕ್ರೋಶ

Karnataka Weather: ಕರ್ನಾಟಕದಲ್ಲಿ ಇಂದು ವಿಪರೀತ ಚಳಿ ಸಾಧ್ಯತೆ

ರಾಹುಲ್ ಗಾಂಧಿ ಮಾತಿಗೆ ನಕ್ಕ ವಿಪಕ್ಷ ಸದಸ್ಯರು: ನಿಮ್ಮದೇ ನಾಯಕನ ಮಾತಿಗೆ ನಗ್ತಿದ್ದೀರಾ ಎಂದ ಸ್ಪೀಕರ್ Video

ಮುಂದಿನ ಸುದ್ದಿ
Show comments