Webdunia - Bharat's app for daily news and videos

Install App

ಗ್ಯಾಸ್ ಚೇಂಬರ್ ನಿರ್ಮಿಸಿ ತಾಯಿ-ಮಕ್ಕಳು ಆತ್ಮಹತ್ಯೆ

Webdunia
ಭಾನುವಾರ, 22 ಮೇ 2022 (14:29 IST)
ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಗ್ಯಾಸ್ ಸಿಲಿಂಡರ್ ಆನ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ರೀತಿಗೆ ಇಡೀ ದೆಹಲಿ ಬೆಚ್ಚಿಬಿದ್ದಿದೆ.
ವಸಂತ ವಿಹಾರ್ ನಗರದ ನಿವಾಸಿಗಳಾದ ಮಂಜು ಹಾಗೂ ಮಕ್ಕಳಾದ ಆಶಿಕಾ ಮತ್ತು ಅಂಕು ಮೃತಪಟ್ಟ ದುರ್ದೈವಿಗಳು.
 ಮನೆಯೊಂದರಲ್ಲಿ 50 ವರ್ಷದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಿದ್ದೂ ಅಲ್ಲದೇ ಹೊರಗೆ ಗಾಳಿ ಹೋಗದಂತೆ ಪ್ಲಾಸ್ಟಿಕ್ ಗಳಿಂದ ಮುಚ್ಚಿದ್ದಾರೆ.
ನಂತರ ಗ್ಯಾಸ್ ಸಿಲಿಂಡರ್ ಆನ್ ಮಾಡಿ ಕಲ್ಲಿದ್ದಲ್ಲು ಉರಿಸಿ ಅದರಿಂದ ಬಿಡುಗಡೆ ಆಗುವ ಕಾರ್ಬನ್ ಮೊನಾಕ್ಸೈಡ್ ಎಂಬ ವಿಷಕಾರಿ ಅನಿಲದಿಂದ ಮೂವರು ಮೃತಪಟ್ಟಿದ್ದಾರೆ.
ಡೆತ್ ನೋಟ್ ನಲ್ಲಿ ಮನೆಯ ಒಳಗೆ ಬರುವವರು ಲೈಟ್ ಸ್ವಿಚ್ ಆನ್ ಮಾಡಬೇಡಿ. ಇದರಿಂದ ಬೆಂಕಿ ಹೊತ್ತಿಕೊಂಡು ನಿಮ್ಮ ಜೀವಕ್ಕೆ ಅಪಾಯ ಆಗುವ ಸಾಧ್ಯತೆ ಇದೆ ಎಂದು ಸ್ಪಷ್ಟವಾಗಿ ವಿವರಿಸಲಾಗಿದೆ.
ನೆರೆಹೊರೆಯವರು ನೀಡಿದ ಮಾಹಿತಿ ಮೇಲೆ ಮನೆಯ ಬಾಗಿಲು ಒಡೆದು ನೋಡಿದ ಪೊಲೀಸರಿಗೆ ಈ ಘಟನೆ ಆಘಾತ ತಂದಿದೆ.
ಮಂಜು ಅವರ ಪತಿ ಕಳೆದ ವರ್ಷ ಕೋವಿಡ್ ನಿಂದ ಮೃತಪಟ್ಟಿದ್ದರು. ಅಂದಿನಿಂದ ಕುಟುಂಬದವರು ನೋವಿನಲ್ಲಿದ್ದರು. ಮಂಜು ಕೂಡ ಅಸ್ವಸ್ಥಗೊಂಡಿದ್ದು, ಹಾಸಿಗೆ ಹಿಡಿದರೆ ಗತಿ ಏನು ಎಂದು ಆತಂಕಗೊಂಡಿದ್ದರು ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments