Select Your Language

Notifications

webdunia
webdunia
webdunia
webdunia

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

ಇಂದ್ರಾಯಣಿ ನದಿ ಸೇತುವೆ ಘಟನೆ

Sampriya

ಮುಂಬೈ , ಸೋಮವಾರ, 16 ಜೂನ್ 2025 (19:51 IST)
Photo Credit X
ಮುಂಬೈ: ಪುಣೆ ಜಿಲ್ಲೆಯ ಮಾವಲ್ ತೆಹಸಿಲ್‌ನಲ್ಲಿ ಇಂದ್ರಾಯಣಿ ನದಿಯ ಕುಂದಮಾಲಾ ಸೇತುವೆ ಕುಸಿದು ನಾಲ್ವರು ಮೃತಪಟ್ಟು 51 ಮಂದಿ ಗಾಯಗೊಂಡ ಸಂಬಂಧ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೋಮವಾರ ಈ ಕಟ್ಟಡವನ್ನು "ಅಪಾಯಕಾರಿ" ಎಂದು ಜಿಲ್ಲಾಧಿಕಾರಿ ಘೋಷಿಸಿದ್ದರು ಎಂದು ಹೇಳಿದರು. 

ಆದರೆ ಪ್ರವಾಸೊಗಿಗೆ ಇದರ ಅರಿವಿಲ್ಲದೆ ಹೋಗಿದ್ದಾರೆ ಎಂದರು. ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಪುಣೆ ಜಿಲ್ಲಾ ಉಸ್ತುವಾರಿ ಸಚಿವ ಅಜಿತ್ ಪವಾರ್ ಅವರು ಈ ವಿಷಯದಲ್ಲಿ ಸೂಕ್ತ ಕ್ರಮಕ್ಕೆ ಭರವಸೆ ನೀಡಿದರು.

ಸ್ಥಳದಲ್ಲಿ ಎನ್‌ಡಿಆರ್‌ಎಫ್ ನೇತೃತ್ವದ ಹುಡುಕಾಟ ಮತ್ತು ಪಾರುಗಾಣಿಕಾ (ಎಸ್ & ಆರ್) ಕಾರ್ಯಾಚರಣೆಯನ್ನು ಸೋಮವಾರ ಮುಕ್ತಾಯಗೊಳಿಸಲಾಯಿತು.

"ಈ ಸೇತುವೆಯನ್ನು ಜಿಲ್ಲಾಧಿಕಾರಿಗಳು ಅಪಾಯಕಾರಿ ಎಂದು ಘೋಷಣೆ ಮಾಡಿದ್ದರು. ಅದಲ್ಲದೆ ಗ್ರಾಮಸ್ಥರು ಎಚ್ಚರಿಕೆ ಫಲಕಗಳನ್ನು ಸಹ ಹಾಕಿದ್ದರು. ಸೇತುವೆಯ ಸ್ಥಿತಿಯ ತೀವ್ರತೆಯ ಬಗ್ಗೆ ಪ್ರವಾಸಿಗರಿಗೆ ತಿಳಿದಿರಲಿಲ್ಲ" ಎಂದು ರಾಜ್ಯ ಗೃಹ ಸಚಿವರೂ ಆಗಿರುವ ಫಡ್ನವಿಸ್ ಪಾಲ್ಘರ್ ಜಿಲ್ಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಂಧೆ ಹೇಳಿದ್ದಾರೆ. ಇದಲ್ಲದೆ, ಇದೇ ರೀತಿಯ ದುರಂತಗಳನ್ನು ತಡೆಗಟ್ಟಲು ರಾಜ್ಯದ ನದಿಗಳಿಗೆ ಅಡ್ಡಲಾಗಿರುವ ಎಲ್ಲಾ ಸೇತುವೆಗಳ ರಚನಾತ್ಮಕ ಲೆಕ್ಕಪರಿಶೋಧನೆಯನ್ನು ಈಗ ನಡೆಸಲಾಗುವುದು ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ