Select Your Language

Notifications

webdunia
webdunia
webdunia
webdunia

2013ರಿಂದ 2023ರ ನಡುವೆ ದಲಿತರ ಮೇಲಿನ ಅಪರಾಧ ಹೆಚ್ಚಳ: ಮಲ್ಲಿಕಾರ್ಜುನ ಖರ್ಗೆ

AICC President Mallikarjun Kharge

Sampriya

ನವದೆಹಲಿ , ಶುಕ್ರವಾರ, 10 ಅಕ್ಟೋಬರ್ 2025 (17:17 IST)
ನವದೆಹಲಿ: ಹರಿಯಾಣದ ಐಪಿಎಸ್ ಅಧಿಕಾರಿ ವೈ ಪುರಾಣ್ ಕುಮಾರ್ ಅವರ ಆತ್ಮಹತ್ಯೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು. 

ದಲಿತ ಮತ್ತು ಆದಿವಾಸಿ ಜನರ ಮೇಲೆ ಹೆಚ್ಚುತ್ತಿರುವ ಅಪರಾಧಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶುಕ್ರವಾರ ಕಟುವಾಗಿ ಟೀಕಿಸಿದ್ದಾರೆ. 

ರಾಯ್ಬರೇಲಿಯಲ್ಲಿ ಇತ್ತೀಚೆಗೆ ದಲಿತ ವ್ಯಕ್ತಿಯೊಬ್ಬನನ್ನು ಕಳ್ಳನೆಂದು ತಪ್ಪಾಗಿ ಭಾವಿಸಿ ಥಳಿಸಿ ಕೊಂದು ಹಾಕಿದ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದು ಆರ್‌ಎಸ್‌ಎಸ್-ಬಿಜೆಪಿಯ ಊಳಿಗಮಾನ್ಯ ಮನೋಭಾವದ ಅಪಾಯಕಾರಿ ದ್ಯೋತಕ ಎಂದು ಹೇಳಿದರು.

2013 ಮತ್ತು 2023 ರ ನಡುವೆ ದಲಿತರ ಮೇಲಿನ ಅಪರಾಧಗಳಲ್ಲಿ ಶೇಕಡಾ 46 ರಷ್ಟು ಏರಿಕೆಯಾಗಿದೆ ಮತ್ತು ಆದಿವಾಸಿಗಳ ಮೇಲಿನ ಅಪರಾಧಗಳಲ್ಲಿ ಶೇಕಡಾ 91 ರಷ್ಟು ಹೆಚ್ಚಳವಾಗಿದೆ ಎಂದರು. 

 
ಹರಿಯಾಣದಲ್ಲಿ ಐಪಿಎಸ್ ಅಧಿಕಾರಿ ವಿರುದ್ಧದ ಜಾತಿ ತಾರತಮ್ಯ, ಹರಿಓಂ ವಾಲ್ಮೀಕಿ ಕಿರುಕುಳ, ಸಿಜೆಐ ಮೇಲಿನ ದಾಳಿ ಮತ್ತು ಅದನ್ನು ಸಮರ್ಥಿಸಿಕೊಳ್ಳುವ ಬಿಜೆಪಿ ಮನಸ್ಥಿತಿ, ಬಿಜೆಪಿ ಆಡಳಿತವಿರುವ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ದಲಿತ ಮಹಿಳೆ ಕಮಲಾ ದೇವಿ ರಾಯ್‌ಗರ್‌ ಮೇಲಿನ ದೌರ್ಜನ್ಯ  ಇವೆಲ್ಲವೂ ಕಾಂಗ್ರೆಸ್‌ನ ಇತ್ತೀಚಿನ ಘಟನೆಗಳಲ್ಲ, ಬಿಜೆಪಿಯ ಅಪಾಯಕಾರಿ ಮನಸ್ಥಿತಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಶ್ರಫ್ ಕೊಲೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿ ಭರತ್‌ಗೆ ಬಿಗ್ ಶಾಕ್