Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಬಹಳ ಗಂಭೀರವಾಗಿದೆ- ಸಿಎಂ ಅರವಿಂದ್ ಕ್ರೇಜಿವಾಲ್

ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಬಹಳ ಗಂಭೀರವಾಗಿದೆ- ಸಿಎಂ ಅರವಿಂದ್ ಕ್ರೇಜಿವಾಲ್
ನವದೆಹಲಿ , ಸೋಮವಾರ, 19 ಏಪ್ರಿಲ್ 2021 (12:49 IST)
ನವದೆಹಲಿ : ದೆಹಲಿಯಲ್ಲಿ ಕೊರೊನಾ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕ್ರೇಜಿವಾಲ್ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದೆಹಲಿಯಲ್ಲಿ ಕೊರೊನಾ ತೀವ್ರಗೊಂಡಿದೆ. ದೆಹಲಿಯಲ್ಲೂ ಮಹಾರಾಷ್ಟ್ರದಂತೆ ಜನತಾ ಕರ್ಪ್ಯೂ ಹಾಕಲಾಗಿದೆ. ಅಂಗಡಿ ಮಾರುಕಟ್ಟೆಗಳಿಗೆ ಸಂಜೆ 5ರವರೆಗೆ ಅವಕಾಶ ನೀಡಲಾಗಿದೆ. ಜನರ ಸಹಕಾರ ಇಲ್ಲದೇ ಕೊರೊನಾ ಕಂಟ್ರೋಲ್ ಅಸಾಧ್ಯ. ದೆಹಲಿಯಲ್ಲಿ ಕೊರೊನಾ ಕಂಟ್ರೋಲ್ ಗೆ ನಿರಂತರ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಅಲ್ಲದೇ ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಕೊರತೆ ಕಾಡುತ್ತಿದೆ. ಐಸಿಯು ಬೆಡ್ ಗಳ ಕೊರತೆಯೂ ಉಂಟಾಗುದೆ. ರೆಮ್ಡಿಸಿವಿರ್  ಇಂಜೆಕ್ಷನ್ ಕೊರತೆಯೂ ಇದೆ. ದೆಹಲಿಯಲ್ಲಿ ಅತಿ ಹೆಚ್ಚು ಕೊರೊನಾ ಟೆಸ್ಟಿಂಗ್ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಲ್ಲಿ ಕೋವಿಡ್ ಪ್ರಕರಣದ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದ ಪಿ.ಚಿದಂಬರಂ