Webdunia - Bharat's app for daily news and videos

Install App

ಪುತ್ರಿಯ ಮೇಲೆ ಪತಿಯಿಂದಲೇ ನಿರಂತರ ಅತ್ಯಾಚಾರ: ಪತ್ನಿ ದೂರು

Webdunia
ಶುಕ್ರವಾರ, 24 ನವೆಂಬರ್ 2023 (14:40 IST)
ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿ ಭಾನುವಾರ ರಾತ್ರಿ ಮೃತ ಸ್ಥಿತಿಯಲ್ಲಿ  ಪತ್ತೆಯಾಗಿದ್ದಾಳೆ. ಆಕೆಯ ತಲೆ ಕಡಿದು ದೇಹವನ್ನು ಸುಡಲಾಗಿದೆ. ಶಂಕಿತ ಆರೋಪಿಯಾದ ಆಕೆಯ ತಂದೆಯನ್ನು ಪೋಲಿಸರು ಬಂಧಿಸಿದ್ದಾರೆ. 
 
ಹುಡುಗಿಯ ದೇಹ ನಗ್ನ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿರಬಹುದು ಎಂದು ಪೋಲಿಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನ್ನ ಗಂಡನ ಮೇಲೆಯೇ ದೂರು ನೀಡಿರುವ ಮೃತ ಬಾಲಕಿಯ ತಾಯಿ, ಮಗಳನ್ನಾತ ಲೈಂಗಿಕವಾಗಿ ಶೋಷಿಸಿದ್ದಾನೆ ಎಂದು ಆರೋಪಿಸಿದ್ದಾಳೆ. 
 
ಮಗಳು ಕಾಣೆಯಾಗಿರುವ ಬಗ್ಗೆ ತಂದೆಯೇ ದೂರು ನೀಡಿದ್ದ. ಮಗಳನ್ನು ವೈದ್ಯರ ಬಳಿ ಚಿಕಿತ್ಸೆಗೆಂದು ವಿಲಿಯಂ ನಗರಕ್ಕೆ ಕೊಂಡೊಯ್ದಿದ್ದೆ. ನನಗೆ ಮಾರುಕಟ್ಟೆಯಲ್ಲಿ ಕೆಲಸವಿದ್ದುದರಿಂದ ಆಕೆಯನ್ನು ಆಟೋದಲ್ಲಿ ಮನೆಗೆ ಕಳುಹಿಸಿದ್ದೆ. ಕೆಲ ಸಮಯದ ನಂತರ ನಾನು ಮನೆಗೆ ಮರಳಿದಾಗ ಮಗಳು ಮನೆಗೆ ತಲುಪದ್ದಿದ್ದು ತಿಳಿದು ಬಂತು ಎಂದು ಆತ ಪೋಲಿಸರಿಗೆ ವಿವರಣೆ ನೀಡಿದ್ದ. 
 
ಆದರೆ ಒಂದು ದಿನದ ನಂತರ ಬಾಲಕಿಯ ತಾಯಿ ತನ್ನ ಪತಿಯ ವಿರುದ್ಧವೇ ಪೋಲಿಸರಲ್ಲಿ ದೂರು ದಾಖಲಿಸಿದಳು. 
 
ಹುಡುಗಿಯ ಮೃತ ದೇಹ ಪತ್ತೆಯಾದ ನಂತರ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ವಿರುದ್ಧದ ಕಾಯಿದೆಯಡಿಯಲ್ಲಿ ಮತ್ತೆ ದೂರು ದಾಖಲಾಯಿತು ಮತ್ತು ಪೋಲಿಸರು ಮೃತಳ ತಂದೆಯನ್ನು ಬಂಧಿಸಿದರು. 
 
ಗಾರೋ ಹಿಲ್ಸ್ ಪ್ರದೇಶದಲ್ಲಿ ನಗ್ನ ಮೃತ ದೇಹ ಪತ್ತೆಯಾಗಿದ್ದರಿಂದ ಆಕೆಯ ದೇಹದ ಸ್ಥಿತಿಯ ಅವಲೋಕನದಿಂದ ಆಕೆಯ ಮೇಲೆ ಅತ್ಯಾಚಾರವಾಗಿರುವುದನ್ನು ಪುಷ್ಠೀಕರಿಸುತ್ತವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಪೋಲಿಸರು ಮರಣೋತ್ತರ ಪರೀಕ್ಷೆಯ ವರದಿಯಾಗಿ ಕಾಯುತ್ತಿದ್ದಾರೆ. ವರದಿ ಬಂದ ನಂತರ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಡಾನ್‌ನಲ್ಲಿ ಭಯಾನಕ ಭೂಕುಸಿತ: ಗ್ರಾಮವೇ ಸರ್ವನಾಶ, ಸಾವಿರಾರು ಮಂದಿ ಸಾವು

ಸಚಿವ ಸ್ಥಾನ ಕಳೆದುಕೊಂಡ ರಾಜಣ್ಣ ನೂರಕ್ಕೆ ನೂರರಷ್ಟು ಬಿಜೆಪಿ ಸೇರುತ್ತಾರೆ: ಶಾಸಕ ಬಾಲಕೃಷ್ಣ ಹೊಸ ಬಾಂಬ್‌

ಧರ್ಮಸ್ಥಳ ವಿಚಾರದಲ್ಲಿ ಆರ್‌ಎಸ್‌ಎಸ್ ವರ್ಸಸ್ ಆರ್‌ಎಸ್‌ಎಸ್ ಹೋರಾಟ: ಪ್ರಿಯಾಂಕ್‌ ಖರ್ಗೆ ಟಾಂಗ್‌

ಪ್ರವಾಹ ಪರಿಸ್ಥಿತಿ ತಡೆಗೆ ಪಾಕ್‌ ರಕ್ಷಣಾ ಸಚಿವ ನೀಡಿದ ಸಲಹೆಗೆ ವಿಶ್ವವೇ ಶಾಕ್‌

ಕೆ ಕವಿತಾ ಅಮಾನತು: ಇದೊಂದು ದೊಡ್ಡ ನಾಟಕ ಎಂದ ಕಾಂಗ್ರೆಸ್‌ ಸಂಸದ ಅನಿಲ್ ಕುಮಾರ್‌

ಮುಂದಿನ ಸುದ್ದಿ