Webdunia - Bharat's app for daily news and videos

Install App

ಪ್ರಧಾನಿ ಮೋದಿಯ ಪಕೋಡಾ ಐಡಿಯಾ ಕಾಂಗ್ರೆಸ್ ಕಾರ್ಯಕರ್ತನಿಗೆ ಲಾಭವಾಯ್ತು!

Webdunia
ಗುರುವಾರ, 21 ಜೂನ್ 2018 (09:32 IST)
ನವದೆಹಲಿ: ಹಿಂದೊಮ್ಮೆ ಪಕೋಡಾ ಮಾರುವುದೂ ಒಂದು ಉದ್ಯೋಗವೇ ಎಂದಾಗ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ರಧಾನಿ ಮೋದಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದವು. ಆದರೆ ಇದೇ ಉದ್ಯೋಗ ಇದೀಗ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಬಾಳಿಗೆ ಬೆಳಕಾಗಿದೆಯಂತೆ!

ಮೋದಿ ತವರೂರು ಗುಜರಾತ್ ನಿವಾಸಿಯಾಗಿರುವ ನಾರಾಯಣ್ ಭಾಯ್ ರಜಪೂತ್ ಕಾಂಗ್ರೆಸ್ ಕಾರ್ಯಕರ್ತ. ಹಿಂದಿ ಸಾಹಿತ್ಯದಲ್ಲಿ ಪದವಿ ಪಡೆದ ಇವರು ಪಕೋಡಾ ಮಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಇದೀಗ ರಾಜ್ಯಾದ್ಯಂತ ಒಟ್ಟು 35 ಪಕೋಡಾ ಸೆಂಟರ್ ಗಳು ಇವರ ಒಡೆತನಲ್ಲಿವೆಯಂತೆ! ಈ ಬಗ್ಗೆ ಆಂಗ್ಲ ಮಾಧ್ಯಮವೊಂದು  ಬೆಳಕು ಚೆಲ್ಲಿದೆ.

ಪ್ರಧಾನಿ ಮೋದಿ ಪಕೋಡಾ ಮಾರುವುದೂ ಒಂದು ಉದ್ಯಮ ಎನ್ನುವ ಹೇಳಿಕೆ ನೀಡಿದ ಬಳಿಕ ಅವರು ಪಕೋಡಾ ಮಾರುವ ಕೆಲಸದಲ್ಲಿ ತೊಡಗಿಸಿಕೊಂಡರಂತೆ. ನಿರುದ್ಯೋಗಿಯಾಗಿ ಕೂರುವುದಕ್ಕಿಂತ ದಿನಕ್ಕೆ 200 ರೂ. ಯಾದರೂ ಸಂಪಾದನೆ ಮಾಡಲು ಸಾಧ್ಯವಾಗುವ ಪಕೋಡಾ ಮಾರುವ ಉದ್ಯೋಗವೇ ಲೇಸು ಎಂದು ನಾರಾಯಣ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಪ್ರತಿನಿತ್ಯ 500 ರಿಂದ 600 ಕೆಜಿ ಪಕೋಡಾ ಮಾರಿ ಲಾಭ ಗಳಿಸುತ್ತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments