Publish Date: Wed, 06 May 2026 (15:00 IST)
Updated Date: Wed, 06 May 2026 (15:01 IST)
ಚೆನ್ನೈ: ತಮಿಳುನಾಡಿನಲ್ಲಿ ಚುನಾವಣೆ ಫಲಿತಾಂಶ ಬರುತ್ತಿದ್ದಂತೇ ಮೈತ್ರಿ ಪಕ್ಷಗಳ ಚಿತ್ರಣವೇ ಬದಲಾಗಿದೆ. ಚುನಾವಣೆಗೆ ಮುನ್ನ ವಿರೋಧಿಗಳಾಗಿದ್ದವರು ಒಂದಾಗಿದ್ದಾರೆ. ತಮಿಳುನಾಡಿನಲ್ಲಿ ಟಿವಿಕೆ ವಿಜಯ್ ಗೆ ಕಾಂಗ್ರೆಸ್ ಬೆಂಬಲಿಸಲು ಇದೊಂದೇ ಕಾರಣವಂತೆ.
ತಮಿಳುನಾಡು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಡಿಎಂಕೆ ಜೊತೆಗಿತ್ತು. ಈ ವೇಳೆ ಟಿವಿಕೆ ವಿರುದ್ಧವೇ ಪ್ರಚಾರ ನಡೆಸಿದ್ದೂ ಇದೆ. ಆದರೆ ಫಲಿತಾಂಶ ಬಂದ ಮೇಲೆ ಚಿತ್ರಣವೇ ಬದಲಾಗಿದೆ. ವಿಜಯ್ ಪಕ್ಷ ಕೆಲವೇ ಸ್ಥಾನಗಳ ಅಂತರದಲ್ಲಿ ಬಹುತಮದ ಕೊರತೆ ಎದುರಿಸುತ್ತಿದೆ.
ಈ ವೇಳೆ ಕಾಂಗ್ರೆಸ್ ತಾನು ಬೆಂಬಲ ನೀಡುವುದಾಗಿ ಮುಂದೆ ಬಂದಿದೆ. ಆದರೆ ತನ್ನ ವಿರೋಧಿ ಜೊತೆಗೆ ಕಾಂಗ್ರೆಸ್ ಕೈ ಜೋಡಿಸಿರುವುದು ಡಿಎಂಕೆ ಆಕ್ರೋಶಕ್ಕೆ ಕಾರಣವಾಗಿದೆ. ಅದೇನೇ ಇದ್ದರೂ ನಮ್ಮ ಬೆಂಬಲ ನಿಮಗಿದೆ ಎಂದು ರಾಹುಲ್ ಘೋಷಿಸಿದ್ದಾರೆ.
ಹಾಗಿದ್ದರೆ ಕಾಂಗ್ರೆಸ್ ಕೊನೆಯ ಕ್ಷಣದಲ್ಲಿ ಪಕ್ಷಾಂತರ ಮಾಡಿದ್ದು ಯಾಕೆ? ಇದಕ್ಕೆ ಕಾಂಗ್ರೆಸ್ ನಾಯಕರು ನೀಡಿರುವ ಸ್ಪಷ್ಟೀಕರಣ ಜಾತ್ಯಾತೀತ ಸರ್ಕಾರ ರಚನೆ ಮಾಡುವುದು. ಬಿಜೆಪಿಯಂತಹ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಟ್ಟು ಜಾತ್ಯಾತೀತ ಸರ್ಕಾರಕ್ಕೆ ನಮ್ಮ ಬೆಂಬಲ ನೀಡಲು ಟಿವಿಕೆಗೆ ಬೆಂಬಲ ನೀಡುತ್ತಿರುವುದಾಗಿ ಕಾಂಗ್ರೆಸ್ ಕಾರಣ ನೀಡಿದೆ. ಆದರೆ ಮುಂದಿನ ದಿನಗಳಲ್ಲಿ ಡಿಎಂಕೆ ಮೈತ್ರಿ ಕಳೆದುಕೊಂಡಿರುವುದು ಕಾಂಗ್ರೆಸ್ ಗೆ ಯಾವ ರೀತಿ ಹೊಡೆತ ನೀಡಲಿದೆ ಕಾದು ನೋಡಬೇಕಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ