Select Your Language

Notifications

webdunia
webdunia
webdunia
webdunia

ಕತ್ತೆಯನ್ನು ಕುದುರೆ ಎಂದು ಕರೆಯಲಾರೆ: ರಾಹುಲ್ ವಿರುದ್ಧ ಹೇಳಿಕೆ ನೀಡಿದ ಶಾಸಕ ಉಚ್ಚಾಟನೆ

ಕತ್ತೆಯನ್ನು ಕುದುರೆ ಎಂದು ಕರೆಯಲಾರೆ: ರಾಹುಲ್ ವಿರುದ್ಧ ಹೇಳಿಕೆ ನೀಡಿದ ಶಾಸಕ ಉಚ್ಚಾಟನೆ
ರಾಯ್ಪುರ್ , ಬುಧವಾರ, 19 ಅಕ್ಟೋಬರ್ 2016 (14:06 IST)
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಂಡಾಯ ಕಾಂಗ್ರೆಸ್ ಶಾಸಕ ಆರ್‌.ಕೆ.ರೈ ರನ್ನು ಪಕ್ಷದಿಂದ ಉಚ್ಚಾಟಿಸಿ ಚತ್ತೀಸ್‌ಗಢ್ ರಾಜ್ಯ ಕಾಂಗ್ರೆಸ್ ಘಟಕ ಆದೇಶ ಹೊರಡಿಸಿದೆ. 
 
ಚತ್ತೀಸ್‌ಗಢ್ ಜನತಾ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಅಜಿತ್ ಜೋಗಿ ಬೆಂಬಲಿಗರಾದ ರೈ, ಪಕ್ಷದ ನಿರ್ಧಾರವನ್ನು ಸ್ವಾಗತಿಸಿದ್ದು, ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
 
ಕಳೆದ ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿ ಕತ್ತೆಯನ್ನು ಕುದುರೆ ಎಂದು ಕರೆಯಲಾರೆ. ಒಂದು ವೇಳೆ ನನ್ನ ಹೇಳಿಕೆ ತಪ್ಪಾಗಿದ್ದಲ್ಲಿ ಹೈಕಮಾಂಡ್ ಕುರುಡಾಗಿದೆ. ಇಲ್ಲವೇ ಕುರುಡನಂತೆ ನಟಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿದ್ದರೂ ನಿರಾಶೆಯಾಗಿಲ್ಲ. ನಾನು ನಿಜವಾಜ ಬುಡಕಟ್ಟು ಸಮುದಾಯದ ಪ್ರತಿನಿಧಿ. ಇದೀಗ ನಾನು ಸ್ವಾತಂತ್ರ್ಯವಾಗಿದ್ದೇನೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಬುಡಕಟ್ಟು ಸಮುದಾಯದ ವಿರೋಧಿ ಎನ್ನುವುದನ್ನು ತೋರಿಸಿಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.
 
ಚತ್ತೀಸ್‌ಗಡ್ ರಾಜ್ಯ ಕಾಂಗ್ರೆಸ್ ಸಮಿತಿಯು ಶಾಸಕ ರೈಯವರನ್ನು ಪಕ್ಷದಿಂದ ಉಚ್ಚಾಟಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಚಹಾ ಮಾಡುವವರು, ಡ್ರಮ್ಸ್ ಬಾರಿಸುವವರು ಪ್ರಧಾನಿಯಾಗಲು ಯೋಗ್ಯರು: ಆಜಂಖಾನ್