Select Your Language

Notifications

webdunia
webdunia
webdunia
webdunia

ಈಗ ಮತದಾನ ನಡೆದರೂ ದಿಲ್ಲಿಗೆ ಮೋದಿ, ಬೆಂಗಳೂರಿಗೆ ಸಿದ್ರಾಮಯ್ಯನೇ!

ಈಗ ಮತದಾನ ನಡೆದರೂ ದಿಲ್ಲಿಗೆ ಮೋದಿ, ಬೆಂಗಳೂರಿಗೆ ಸಿದ್ರಾಮಯ್ಯನೇ!
ನವದೆಹಲಿ , ಸೋಮವಾರ, 21 ಆಗಸ್ಟ್ 2017 (08:38 IST)
ನವದೆಹಲಿ: ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣಾ ಪರ್ವ. ಹಾಗಾಗಿ ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.

 
ಆಂಗ್ಲ ವಾಹಿನಿಯೊಂದರ ಸಮೀಕ್ಷೆ ಪ್ರಕಾರ ಈಗ ಚುನಾವಣೆ ನಡೆದರೆ ಕೇಂದ್ರದಲ್ಲಿ ಪ್ರಧಾನಿ ಮೋದಿಯೇ ಮತ್ತೆ ಅಧಿಕಾರಕ್ಕೆ ಬರುತ್ತಾರೆ. ಇತ್ತ ಕರ್ನಾಟಕದಲ್ಲಿ ಸಿದ್ದರಾಮಯ್ಯನವರೇ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ.

ಸಮೀಕ್ಷೆಯ ಪ್ರಕಾರ ಸಿದ್ದರಾಮಯ್ಯ ಯಡಿಯೂರಪ್ಪ ಮತ್ತು ಕುಮಾರಸ್ವಾಮಿಗಿಂತ ಹೆಚ್ಚಿನ ಅಂಕ ಗಳಿಸಿ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಶೇ. 46 ಮಂದಿ ಸಿದ್ದರಾಮಯ್ಯನವರನ್ನು ಬೆಂಬಲಿಸುತ್ತಾರೆ. ನಂತರದ ಸ್ಥಾನದಲ್ಲಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಇರಲಿದ್ದಾರೆ.

ಅತ್ತ ಕೇಂದ್ರದಲ್ಲಿ ಪ್ರಧಾನಿ ಮೋದಿ ಜನಪ್ರಿಯತೆ ಎಳ್ಳಷ್ಟೂ ಕುಂದಿಲ್ಲ. ಹೀಗಾಗಿ ಈಗ ಮತ್ತೆ ಚುನಾವಣೆ ನಡೆದರೂ ಅವರೇ ಪ್ರಧಾನಿಯಾಗಲಿದ್ದಾರೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರಿಗಿಂತ ತುಂಬಾ ಹಿಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಂಚತಾರಾ ಹೋಟೆಲ್‌‌ಗಳಿಂದ ದೂರವಿರಿ: ಸಚಿವರಿಗೆ ಪ್ರಧಾನಿ ಸಲಹೆ