Webdunia - Bharat's app for daily news and videos

Install App

ಗ್ಯಾರಂಟಿಗೆ ದುಡ್ಡಿಲ್ಲ, ಸಿಎಂ ಆದಮೇಲೇ ಹಣ ಸಾಲಲ್ಲ ಅಂತ ಗೊತ್ತಾಗಿದ್ದು ಎಂದ ಮುಖ್ಯಮಂತ್ರಿ

Krishnaveni K
ಮಂಗಳವಾರ, 11 ಮಾರ್ಚ್ 2025 (10:36 IST)
ಹೈದರಾಬಾದ್: ಗ್ಯಾರಂಟಿಗೆ ದುಡ್ಡು ಸಾಕಾಗ್ತಿಲ್ಲ. ಸಿಎಂ ಆದಮೇಲೆಯೇ ಈಗ ಇರುವ ಆದಾಯ ಸಾಕಾಗಲ್ಲ ಎಂದು ಗೊತ್ತಾಗಿದ್ದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಕೊಡುಗೆಯಿದೆ. ಇತ್ತೀಚೆಗೆ ಕಾಂಗ್ರೆಸ್ ಯಾವುದೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಾಗಲೂ ಉಚಿತ ಗ್ಯಾರಂಟಿ ಯೋಜನೆಗಳ ಭರವಸೆ ನೀಡುತ್ತಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಗ್ಯಾರಂಟಿ ಯೋಜನೆ ಭರವಸೆ ನೀಡಿ ಸಕ್ಸಸ್ ಕಂಡ ಬಳಿಕ ತೆಲಂಗಾಣದಲ್ಲೂ ಅದೇ ಫಾರ್ಮುಲಾ ಮಾಡಿತ್ತು. ಹೀಗಾಗಿ ತೆಲಂಗಾಣದಲ್ಲೂ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೆ ಬಂತು.

ಆದರೆ ಈಗ ಗ್ಯಾರಂಟಿಗೆ ಹಣ ಸಾಕಾಗ್ತಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ ಅಳಲು ತೋಡಿಕೊಂಡಿದ್ದಾರೆ. ರಾಜ್ಯದ ತಿಂಗಳ ಗಳಿಕೆ 18500 ಕೋಟಿ ರೂ. ಉಳಿಕೆ ಕೇವಲ 5500 ಕೋಟಿ ರೂ. ಇದು ಸಾಲಲ್ಲ ಎಂದು ಸಿಎಂ ಆದಮೇಲೆಯೇ ಗೊತ್ತಾಗಿದ್ದು ಎಂದಿದ್ದಾರೆ.

ಹೀಗಾಗಿ ತೆಲಂಗಾಣದಲ್ಲಿ ಈಗ ಗ್ಯಾರಂಟಿಗೆ ಹಣ ಹೊಂದಿಸಲು ಪರದಾಡುವ ಪರಿಸ್ಥಿತಿ ಬಂದಿದೆ. ಪ್ರತೀ ತಿಂಗಳು ಗ್ಯಾರಂಟಿಗೆ ಮೀಸಲಿಡಲು ನಮ್ಮಲ್ಲಿ ಹಣವಿಲ್ಲ. ಕ್ಷೇತ್ರ ವಿಂಗಡನೆ ಬಗ್ಗೆ ಚರ್ಚೆಯಾಗುವ ಬದಲು ದೇಶದಾದ್ಯಂತ ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆಯಾಗಬೇಕಿದೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price today: ಅಡಿಕೆ ಬೆಳೆಗಾರರಿಗೆ ಇಂದು ನಿರಾಸೆ, ಇಂದಿನ ದರ ಎಷ್ಟಾಗಿದೆ ನೋಡಿ

Shocking video: ದುಪ್ಪಟ್ಟು ದರ ವಸೂಲಿ ಮಾಡುತ್ತಿರುವುದೇಕೆ ಪ್ರಶ್ನಿಸಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ರೈಲು ಸಿಬ್ಬಂದಿ

Gold Price today: ಲಕ್ಷ ಗಡಿ ದಾಟಿದ್ದ ಚಿನ್ನ ಇಂದು ಮತ್ತಷ್ಟು ಏರಿಕೆ

ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ, ಪೊಲೀಸರಿಂದ ಚೆಕಿಂಗ್

Baloochistan Army blast video: ಬಲೂಚಿಸ್ತಾನ ದಾಳಿಗೆ ಛಿದ್ರ ಛಿದ್ರವಾಗಿ ಬಿತ್ತು 14 ಪಾಕಿಸ್ತಾನ ಸೈನಿಕರ ದೇಹ

ಮುಂದಿನ ಸುದ್ದಿ
Show comments