Webdunia - Bharat's app for daily news and videos

Install App

ವಿಶ್ವದ ದೊಡ್ಡಣ್ಣನಿಗೆ ಗುನ್ನ ಇಡಲು ಚೀನಾ ಹೆಣೆದಿದ್ಯಾ ರಣತಂತ್ರ....?

geetha
ಸೋಮವಾರ, 12 ಫೆಬ್ರವರಿ 2024 (20:22 IST)
ಅಮೆರಿಕಾ ಅಧ್ಯಕ್ಷ ಬೈಡೆನ್
ನವದೆಹಲಿ-ತೊಂದರೆ ಕೊಡೋದು, ಮೋಸ ಮಾಡೋದು, ಬೆನ್ನ ಹಿಂದೆ ನಿಂತೂ ಚೂರಿ ಹಾಕೋ ಬುದ್ದಿ ಚೀನಾಗೆ ಹೊಸದೇನಲ್ಲ.. ದಶಕಗಳಿಂದ ಚೀನಾ ಇದೇ ಅಶುದ್ದ ಕಾಯಕವನ್ನು ಮಾಡ್ತಾ ಬಂದು ಬಿಟ್ಟಿದೆ.ತಂಟೆ ಮಾಡುವ ಗುಣ ಅಂತ ಯಾರಿಗಾದ್ರು ಇದ್ರೆ, ಅದು ಜಗತ್ತಿನ ಮುಂದೆ ಕಳ್ಳ ಮುಖವಾಡವನ್ನು ಹಾಕಿಕೊಂಡಿರುವ ಚೀನಾಗೆ ಅಕ್ಷರಶಃ ಅನ್ವಹಿಸುತ್ತೆ.. ಅದೇ ರೀತಿಯಾಗಿ ಚೀನಾ ಮತ್ತೊಂದು ಪಿತೂರಿಯ ಕೆಲಸವನ್ನು ಮಾಡಲು ಬಿಗ್‌ಪ್ಲಾನ್ ಹಾಕಿಕೊಂಡಿದೆ ಅಂತ ಹೇಳಲಾಗ್ತಿದೆ.ಚೀನಾ ಅಂದ್ರೆ ಮೊಸ್ಟ್ ಡೇಂಜರಸ್ ಕಂಟ್ರಿ.ಲ್ಪ ಯಾಮಾರಿದ್ರೂ ನಂಬಿದವರನ್ನೆ ಅತಂತ್ರವಾಗಿಸಿ ಬಿಡುವ ಜಾಯಮಾನಕ್ಕೆ ಸೇರಿದ ದೇಶ... ಜೊತೆಯಲ್ಲೆ ಇದ್ದು ಬೆನ್ನಿಗೆ ಚೂರಿ ಹಾಕ್ತಾರೆ ಅಂತರಲ್ಲ ಹಾಗೇ ಇದರ ಮೂಲ ಕಸುಬು.

ಚೀನಾ ಸೂಪರ್ ಪವರ್ ಆಗುವ ಹಪಾಹಪಿಯಲ್ಲಿ ಏನೇನೋ ಮಾಡಲು ಹೊರಟು ನಿಲ್ಲುತ್ತೆ. ವಿಚಿತ್ರವಾದ ಅಜೆಂಡಾವನ್ನು ಇಟ್ಟುಕೊಂಡೆ ಜಗತ್ತಿನ ನಿದ್ದೆಯನ್ನು ಕೆಡಿಸುವ ಹುಚ್ಚು ಹಠವನ್ನು ಮಾಡುತ್ತೆ ಕೆಂಪು ದೇಶ ಚೀನಾ... ಅದಕ್ಕಾಗಿ ಚೀನಾ ವಿಶ್ವದ ದೊಡ್ಡಣ್ಣನಿಗೆ ಶಾಕ್ ಕೊಡಲು ಅದೊಂದು ಅಸ್ತçವನ್ನು ಪ್ರಯೋಗಿಸುತ್ತಿದೆ ಎನ್ನುವ ಟಾಕ್ ಇದೆ. ಅದು ಉತ್ತರ ಕೊರಿಯಾದ ಮೂಲಕ ಅಮೆರಿಕಾಗೆ ಚೀನಾ ಕಂಡ್ರೆ ಆಗಲ್ಲ... ಹಾಗೆ ಚೀನಾಗೂ ದೊಡ್ಡಣ್ಣನನ್ನು ಅತಂತ್ರವಾಗಿಸುವ ದೊಡ್ಡ ಅಜೆಂಡಾ ಇದೆ. ಇದಕ್ಕೆ ಕಾರಣ ಸೂಪರ್ ಪವರ್ ಆಗಬೇಕು ಅನ್ನುವ ಅಹಂ.

ರಷ್ಯಾ, ಅಮೆರಿಕಾ ಚೀನಾ ದೇಶಗಳು ಜಗತ್ತಿನ ಸೂಪರ್ ಪವರ್ ಕಿರೀಟಕ್ಕಾಗಿ ಬಿಗ್‌ಫೈಟ್ ನಡೆಸುತ್ತಾ ಬಂದಿವೆ.. ಈಗಾಗಲೇ ಈ ದಾರಿಯಲ್ಲಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಅಮೆರಿಕಾದ ಜಾಗವನ್ನು ಅತಿಕ್ರಮಿಸಲು ಚೀನಾಗೆ ಇನ್ನೂ ಬಹಳ ದೂರ ಹೆಜ್ಜೆ ಇಡಬೇಕಾಗಿದೆ. ಅದಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕಾದ ಬಲವನ್ನು ಕುಗ್ಗಿಸಲು ಬೇಜಾನ್ ಕುತಂತ್ರವನ್ನು ಮಾಡುತ್ತಾ ಬಂದಿದೆ.. ಅಪ್‌ಕೋರ್ಸ್ ಈಗಲೂ ಅದೇ ಹಾದಿಯಲ್ಲಿದೆ . ನಾರ್ಥ್ ಕೊರಿಯಾವೂ ಚೀನಾ ಮತ್ತು ರಷ್ಯಾಗೆ ಅತ್ಯಾಪ್ತ ದೇಶ.ಒಂಥರ ಮೂರು ದೇಶಗಳು ಚಡ್ಡಿ ದೋಸ್ತ್ ಇದ್ದಂತೆ. ಏನೇ ಸಮಸ್ಯೆಗಳು ಎದುರಾದರೂ ಒಂದಕ್ಕೊAದು ಸಾಥ್ ಕೊಟ್ಟು, ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊAಡು, ಮುಂದಾಗುವ ಅಘಾತವನ್ನು ತಡೆದು ನಿಲ್ಲಿಸುತ್ತವೆ.

ಆದ್ರೆ ರಷ್ಯಾ ಮತ್ತು ಚೀನಾಗಳು ಅಮೆರಿಕಾವನ್ನು ಶತಯಗತಾಯ ಬಗ್ಗುಬಡಿಯಲು ಅಖಾಡಕ್ಕೆ ಇಳಿದಂತಿವೆ.. ಅದರಲ್ಲೂ ಚೀನಾ ಅಂತೂ ದೊಡ್ಡಣ್ಣನಿಗೊಂದು ಮುಕ್ತಿ ಕಾಣಿಸಲೇಬೇಕು ಅಂತ ಡಿಸೈಡ್ ಮಾಡಿದಂತಿದೆ. ಇದಕ್ಕಾಗಿ ತಿಕ್ಕಲು ದೊರೆ ಮೊದಲೇ ಅಮೆರಿಕಾವನ್ನು ಕಂಡ್ರೆ ಗುರ್ ಅನ್ನುವ ಕಿಮ್ ಜಾನ್ ಉನ್‌ನ ತಲೆಗೆ ಹೊಸ ಹುಳ ಬಿಟ್ಟಂತಿದೆ. ಅಮೆರಿಕಾದ ವಿರುದ್ಧ ಉತ್ತರಕೊರಿಯಾವನ್ನು ಎತ್ತಿ ಕಟ್ಟಿದಂತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments