Select Your Language

Notifications

webdunia
webdunia
webdunia
webdunia

ಮಕ್ಕಳು ಅವಮಾನ ಮಾಡಿದ್ರು: 4 ಕೋಟಿ ಆಸ್ತಿಯನ್ನು ಈ ತಾತ ಕೊಟ್ಟಿದ್ದು ಯಾರಿಗೆ ಗೊತ್ತಾ

ಅರುಲ್ಮಿಗು ರೇಣುಕಾಂಬಲ್ ಅಮ್ಮನ್ ದೇವಸ್ಥಾನ

Sampriya

ಚೆನ್ನೈ , ಬುಧವಾರ, 25 ಜೂನ್ 2025 (18:23 IST)
Photo Credit X
ಚೆನ್ನೈ: ನಿವೃತ್ತ ಸೇನಾ ಅಧಿಕಾರಿಯೊಬ್ಬರು ಮಕ್ಕಳು ಅವಮಾನ ಮಾಡಿದರೆಂದ ತನ್ನ 4 ಕೋಟಿ ಆಸ್ತಿಯನ್ನು ತಮಿಳುನಾಡಿನ ದೇವಸ್ಥಾನವೊಂದಕ್ಕೆ ದಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.  

ತಿರುವಣ್ಣಾಮಲೈ ಜಿಲ್ಲೆಯ ಅರಣಿ ಬಳಿಯ ಪಡವೇಡುವಿನ ಅರುಲ್ಮಿಗು ರೇಣುಕಾಂಬಲ್ ಅಮ್ಮನ್ ದೇವಸ್ಥಾನದ ಹುಂಡಿಯಲ್ಲಿನ ಕಾಣಿಕೆ ಎಣಿಕೆ ಮಾಡುವಾಗ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, ಅಧಿಕಾರಿಗಳು ಶಾಕ್ ಆಗಿದ್ದಾರೆ.

ಜೂನ್ 25, ಮಂಗಳವಾರ, ಸಾಮಾನ್ಯ ದ್ವೈಮಾಸಿಕ ಸಂಗ್ರಹದ ಸಮಯದಲ್ಲಿ, ಸಿಬ್ಬಂದಿ ಮಧ್ಯಾಹ್ನ 12.30 ರ ಸುಮಾರಿಗೆ ಆವರಣದೊಳಗಿನ 11 ಹುಂಡಿಯನ್ನು ತೆರೆದಾಗ ಪತ್ರವೊಂದರಲ್ಲಿ ತನ್ನ ಆಸ್ತಿಯನ್ನು ಸ್ವಯಂಪ್ರೇರಣೆಯಿಂದ ದೇವಸ್ಥಾನಕ್ಕೆ ದಾನ ಮಾಡಲಾಗಿದೆ ಎಂದು ಕೈಬರಹದ ಟಿಪ್ಪಣಿಯೊಂದಿಗೆ ಮೂಲ ಭೂಮಿ ಮತ್ತು ಮನೆ ಮಾಲೀಕತ್ವದ ಕಾಗದದ ಬಂಡಲ್ ಅನ್ನು ಹಾಕಿದ್ದಾರೆ.

ನಾವು ಇದೇ ಮೊದಲ ಬಾರಿಗೆ ಇಂತಹ ಕೊಡುಗೆಯನ್ನು ನೋಡುತ್ತಿದ್ದೇವೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ ಸಿಲಂಬರಸನ್ ಹೇಳಿದರು. 

ಪ್ರಾಥಮಿಕ ವಿಚಾರಣೆಯಲ್ಲಿ ಕೇಶವಪುರಂ ಗ್ರಾಮದ ನಿವೃತ್ತ ಸೇನಾ ಸಿಬ್ಬಂದಿ 65 ವರ್ಷದ ಎಸ್ ವಿಜಯನ್ ದಾನಿ ಎಂದು ತಿಳಿದುಬಂದಿದೆ. ಬಹುಕಾಲದ ಭಕ್ತ ವಿಜಯನ್ ತನ್ನ ಪತ್ನಿಯಿಂದ ದೂರವಾಗಿ ಒಂಟಿಯಾಗಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. 

ಮದುವೆಯಾಗಿ ಚೆನ್ನೈ ಮತ್ತು ವೆಲ್ಲೂರಿನಲ್ಲಿ ನೆಲೆಸಿರುವ ಅವರ ಇಬ್ಬರು ಪುತ್ರಿಯರು ತಮ್ಮ ಆಸ್ತಿಯನ್ನು ತಮಗೆ ವರ್ಗಾಯಿಸುವಂತೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದೊಂದಿಗೆ ಅರ್ಥಪೂರ್ಣ ಮಾತುಕತೆಗೆ ಸಿದ್ಧ: ಪಾಕ್ ಪ್ರಧಾನಿ