ಕಾಂಡೋಮ್ ವಿಚಾರದಲ್ಲಿ ಸಲ್ಮಾನ್ ಹಾದಿಯಲ್ಲೇ ನಡೆಯಿತು ಕೇಂದ್ರ

Webdunia
ಬುಧವಾರ, 13 ಡಿಸೆಂಬರ್ 2017 (08:10 IST)
ನವದೆಹಲಿ: ಇತ್ತೀಚೆಗೆ ಕಾಂಡೋಮ್ ಜಾಹೀರಾತುಗಳು ಎಗ್ಗಿಲ್ಲದೇ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದೆ. ಇದರಿಂದ ಮಕ್ಕಳೆದುರು ಟಿವಿ ನೋಡಲು ಮುಜುಗರವಾಗುತ್ತಿತ್ತು. ಆದರೆ ಇನ್ಮುಂದೆ ಹಾಗಾಗಲ್ಲ.
 

ಕೇಂದ್ರ ಸರ್ಕಾರ ಎಲ್ಲಾ ದೂರದರ್ಶನ ವಾಹಿನಿಗಳಿಗೆ ಕಾಂಡೋಮ್ ಜಾಹೀರಾತು ಪ್ರಸಾರ ಮಾಡಲು ಸಮಯ ನಿಗದಿಪಡಿಸಿದೆ. ಇನ್ಮುಂದೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗಿನ ಅವಧಿಯಲ್ಲಿ ಮಾತ್ರ ಕಾಂಡೋಮ್ ಜಾಹೀರಾತುಗಳು ಪ್ರಸಾರ ಮಾಡಬೇಕೆಂದು ಕೇಂದ್ರ ನಿರ್ದೇಶನ ನೀಡಿದೆ.

ಕೇಂದ್ರದ ಈ ನಿರ್ಧಾರ ಸ್ವಾಗತಾರ್ಹ. ಯಾಕೆಂದರೆ ಟಿವಿ ವಾಹಿನಿ ನೋಡುವಾಗ ಕುಟುಂಬ ಸಮೇತರಾಗಿ ನೋಡುತ್ತೇವೆ. ಮಕ್ಕಳು ನೋಡುವಾಗ ಇಂತಹ ಅಸಭ್ಯ ಜಾಹೀರಾತುಗಳಿದ್ದರೆ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಗುತ್ತದೆ.

ಇತ್ತೀಚೆಗೆ ಸಲ್ಮಾನ್ ಖಾನ್ ತಾವು ನಡೆಸಿಕೊಡುವ ಬಿಗ್ ಬಾಸ್ ಹಿಂದಿ ರಿಯಾಲಿಟಿ ಶೋನಲ್ಲಿ ಬಿಪಾಶಾ ಬಸು ಮತ್ತು ಆಕೆಯ ಪತಿ ಕರಣ್ ಸಿಂಗ್ ನಟಿಸಿರುವ ಕಾಂಡೋಮ್ ಜಾಹೀರಾತಿಗೆ ಕತ್ತರಿ ಹಾಕಿದ್ದರು.  ಆಗಲೂ ಸಲ್ಮಾನ್ ಇದೇ ಕಾರಣ ನೀಡಿದ್ದರು.

ಕೆಲವು ತಿಂಗಳುಗಳ ಹಿಂದೆ ಗೋವಾ ಸಾರಿಗೆ ಸಂಸ್ಥೆಯಲ್ಲೂ ಸನ್ನಿ ಲಿಯೋನ್ ನಟಿಸಿದ್ದ ಕಾಂಡೋಮ್ ಜಾಹೀರಾತುಗಳು ಪ್ರಯಾಣಿಕರಿಗೆ ಮುಜುಗರವುಂಟು ಮಾಡುತ್ತಿದೆ ಎಂಬ ದೂರುಗಳು ಕೇಳಿಬಂದಿತ್ತು.

ಸೆಕ್ಸ್ ವಿಚಾರದಲ್ಲಿ ನಾವು ಮುಕ್ತರಾಗಬೇಕು ನಿಜ. ಆದರೆ ಅದು ಅಪ್ರಾಪ್ತರ ಮುಂದೆ ಮುಜುಗರವಾಗುವಂತೆ ಇರಬಾರದು. ಎಲ್ಲಿ, ಯಾವಾಗ ಪ್ರಸಾರ ಮಾಡಬೇಕು ಎಂಬ ಬದ್ಧತೆ ನಮಗಿರಬೇಕು. ಆ ಹಿನ್ನಲೆಯಲ್ಲಿ ಕೇಂದ್ರ ದೂರದರ್ಶನದಲ್ಲಿ ಮಾತ್ರವಲ್ಲ, ಖಾಸಗಿ ವಾಹಿನಿ, ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳಿಗೂ ಕಡಿವಾಣ ಹಾಕಿದರೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಅತ್ಯಂತ ಪ್ರಾಚೀನ ಭಾಷೆ: ಶೋಭಾ ಕರಂದ್ಲಾಜೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದರು, ಇನ್ನು ನಾನ್ಯಾವ ಲೆಕ್ಕ: ಡಿಕೆ ಶಿವಕುಮಾರ್

ನಿಮ್ಮ ಉಗುರಿನ ಆಕಾರದಿಂದ ವ್ಯಕ್ತಿತ್ವ ತಿಳಿಯಿರಿ

ಕನ್ನಡ ರಾಜ್ಯೋತ್ಸವದಂದು ಮಹತ್ವದ ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ