Select Your Language

Notifications

webdunia
webdunia
webdunia
webdunia

ವಂಚಕ ವಿಜಯ ಮಲ್ಯ ಪರವಾಗಿ ಬ್ಯಾಟ್ ಬೀಸಿದ ಆ ಕೇಂದ್ರ ಸಚಿವರು ಯಾರು ಗೊತ್ತಾ?

ವಂಚಕ ವಿಜಯ ಮಲ್ಯ ಪರವಾಗಿ ಬ್ಯಾಟ್ ಬೀಸಿದ ಆ ಕೇಂದ್ರ ಸಚಿವರು ಯಾರು ಗೊತ್ತಾ?
ನವದೆಹಲಿ , ಶುಕ್ರವಾರ, 14 ಡಿಸೆಂಬರ್ 2018 (10:38 IST)
ನವದೆಹಲಿ : ಭಾರತದ ಬ್ಯಾಂಕುಗಳಿಗೆ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡ ಮದ್ಯದ ದೊರೆ ವಿಜಯ ಮಲ್ಯ ಪರವಾಗಿ ಇದೀಗ ಕೇಂದ್ರ ಸಚಿವರೊಬ್ಬರು ಬ್ಯಾಟ್ ಬೀಸಿದ್ದಾರೆ.


ಉದ್ಯಮಿ ವಿಜಯ ಮಲ್ಯ ಭಾರತದ ಬ್ಯಾಂಕುಗಳಿಂದ ಸಾಲ ಪಡೆದು ಅದು ಮರುಪಾವತಿ ಮಾಡದೆ 9 ಸಾವಿರ ಕೋಟಿ ರೂ ವಂಚಿಸಿ ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದರು. ಆದರೆ ಲಂಡನ್ ನಲ್ಲಿಯೂ ಕೂಡ  ವಿಜಯ್ ಮಲ್ಯ ವಂಚಕ ಎಂದು ನಿರ್ಧರಿಸಿ ಗಡಿಪಾರು ಮಾಡಲು ಹೊರಟಿದೆ. ಆದರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಾತ್ರ ಪಾಪ ಒಂದು ಸಲ ಅವರು ಸಾಲ ಮರುಪಾವತಿ ಮಾಡಿಲ್ಲ. ಅಷ್ಟಕ್ಕೇ ಮಲ್ಯರನ್ನು ಕಳ್ಳ ಎಂದು ಕರೆದ್ರೆ ಹೇಗೆ ಅಂತ ಹೇಳಿ ಮಲ್ಯ ಪರವಾಗಿ ಬ್ಯಾಟ್ ಬೀಸಿದ್ದಾರೆ .


ಕಳೆದ 4 ದಶಕಗಳಿಂದ ಮಲ್ಯ ಸಮಯಕ್ಕೆ ಸರಿಯಾಗಿ ಸಾಲ ತೀರಿಸುತ್ತಿದ್ದರು. ವ್ಯವಹಾರ ಅಂದಮೇಲೆ ಲಾಭ, ನಷ್ಟ ಇದ್ದೇ ಇರುತ್ತೆ. ಅದೇ ರೀತಿ ಮಲ್ಯಗು ನಷ್ಟ ಆಗಿದೆ. ಅವರು ಸಾಲ ತೀರಿಸಲು ಆಗಿಲ್ಲ. ಒಂದು ಸಾರಿ ಸಾಲ ತೀರಿಸಿಲ್ಲ ಎಂದು ಅವರನ್ನು ಕಳ್ಳ ಎಂದು ಕರೆಯೋದು ಸರಿಯಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದೋಷ ನಿವಾರಣೆ ನೆಪದಲ್ಲಿ ಕಳ್ಳ ಬಾಬನೊಬ್ಬ ಮಹಿಳೆಯರಿಗೆ ಮಾಡುತ್ತಿದ್ದದ್ದೇನು ಗೊತ್ತಾ?