Select Your Language

Notifications

webdunia
webdunia
webdunia
Tuesday, 15 April 2025
webdunia

ಯತ್ನಾಳ್​​​ಗೆ BYV ಪರೋಕ್ಷ ಎಚ್ಚರಿಕೆ

Vijayendra
ದೆಹಲಿ , ಶನಿವಾರ, 23 ಡಿಸೆಂಬರ್ 2023 (19:43 IST)
ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​​ಗೆ, ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಚ್ಚರಿಸಿದ್ದಾರೆ.ದೆಹಲಿಯಲ್ಲಿ ಮಾತನಾಡಿದ ಅವರು, ಈ ಸಮಯದಲ್ಲಿ ದುಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಮಾಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಕೈ ಬಲ ಪಡಿಸಬೇಕಿದೆ. ಕಾರ್ಯಕರ್ತರು ಹಗಲು ರಾತ್ರಿ ತಪಸ್ಸಿನ ಮೂಲಕ ದುಡಿಯುತ್ತಿದ್ದಾರೆ. ಅವರಿಗೆ ಅವಮಾನ ಆಗುವ ರೀತಿ ಯಾರು ನಡೆದುಕೊಳ್ಳಬಾರದು.

ನಾನು ರಾಜ್ಯದ ಅದ್ಯಕ್ಷ ಆಗಿದ್ದೇನೆ. ನಾಡು ಕಂಡ ರೈತನ ಮಗ ಮಾಜಿ ಸಿಎಂ ಯಡಿಯೂರಪ್ಪ ಮಗನೂ ಹೌದು. ಹಾಗಾಗಿ ಈ ಮಾತನ್ನು ನಾನು ಹೇಳ್ತಿಲ್ಲ. ಆದ್ರೆ, ಹೈ ಕಮಾಂಡ್ ಮುಂದೆ ಯಾವುದೇ ದೂರು ಕೊಟ್ಟಿಲ್ಲ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋಗುತ್ತೇನೆ. ಅಷ್ಟೇ ವಿಶ್ವಾಸ ಅವರು ಕೊಡುತ್ತಾರೆ ಅಂತಾ ಭಾವಿಸಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​​​ಗೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಒಂದು ವರ್ಗದ ಮುಖ್ಯಮಂತ್ರಿ ಅಲ್ಲ