Select Your Language

Notifications

webdunia
webdunia
webdunia
webdunia

ಅಲಕಾನಂದ ನದಿಗೆ ಉರುಳಿದ ಬಸ್: ತೀರ್ಥಯಾತ್ರೆಗೆ ಹೋದವರು ನೀರಿನಲ್ಲಿ ಕೊಚ್ಚಿ ಹೋದರು

Alakananda river bus

Krishnaveni K

ಡೆಹ್ರಾಡೂನ್ , ಗುರುವಾರ, 26 ಜೂನ್ 2025 (11:49 IST)
Photo Credit: X
ಡೆಹ್ರಾಡೂನ್: ಉತ್ತರಾಖಂಡದ ರುದ್ರಪ್ರಯಾಗ ಬಳಿ 18 ಜನರನ್ನು ಹೊತ್ತಿದ್ದ ಬಸ್ ಒಂದು ಅಲಕಾನಂದ ನದಿಗೆ ಬಿದ್ದು 10 ಮಂದಿ ನಾಪತ್ತೆಯಾಗಿದ್ದಾರೆ. ಈ ಪೈಕಿ ಇಬ್ಬರು ಸಾವನ್ನಪ್ಪಿರುವುದು ಕನ್ ಫರ್ಮ್ ಆಗಿದೆ.

ತೀರ್ಥಯಾತ್ರೆಗೆಂದು ಹೋದವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವುದು ಖಚಿತವಾಗಿದ್ದು 10 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಳೆಯಿಂದಾಗಿ ನದಿಯಲ್ಲಿ ನೀರಿನ ಅಬ್ಬರವೂ ಜೋರಾಗಿಯೇ ಇದೆ. ಈ ಹಿನ್ನಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ನದಿಯಲ್ಲಿ ನೀರು ತುಂಬಿರುವುದರಿಂದ ಮತ್ತು ಕಡಿದಾದ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯವೂ ಕಷ್ಟವಾಗುತ್ತಿದೆ. ಪರಿಹಾರ ಕಾರ್ಯದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು ಪೊಲೀಸರು ತೊಡಗಿಸಿಕೊಂಡಿದ್ದು ನಾಪತ್ತೆಯಾದವರ ಪತ್ತೆಗೆ ಹರಸಾಹಸಪಡುತ್ತಿದ್ದಾರೆ. ಎಲ್ಲರೂ ತೀರ್ಥಯಾತ್ರೆಗೆಂದು ಹೊರಟವರು ಎನ್ನಲಾಗಿದೆ. ಮೃತರ ಬಗ್ಗೆ ಹೆಚ್ಚಿನ ವರದಿಗಳು ಇನ್ನಷ್ಟೇ ಬರಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ