Select Your Language

Notifications

webdunia
webdunia
webdunia
webdunia

ನಾಯಿಗೆ ಆಹಾರ ಹಾಕಿಲ್ಲ ಎಂದು ಕ್ರೂರವಾಗಿ ಥಳಿಸಿ ಕೊಲೆ!

ನಾಯಿಗೆ ಆಹಾರ ಹಾಕಿಲ್ಲ ಎಂದು ಕ್ರೂರವಾಗಿ ಥಳಿಸಿ ಕೊಲೆ!
ತಿರುವನಂತಪುರಂ , ಮಂಗಳವಾರ, 8 ನವೆಂಬರ್ 2022 (11:02 IST)
ತಿರುವನಂತಪುರಂ : ನಾಯಿಗೆ ಆಹಾರ ಹಾಕಿಲ್ಲ ಎಂದು ಸಹೋದರನನ್ನು ಯುವಕನೊಬ್ಬ ಕೊಲೆ ಮಾಡಿದ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ.

ಹರ್ಷದ್(21)ನನ್ನು ಆತನ ಸಹೋದರ ಹಕೀಂ (27) ಎಂಬಾತ ಪಾಲಕ್ಕಾಡ್ ಜಿಲ್ಲೆಯ ಮುಲಯಂಕಾವು ಪ್ರದೇಶದಲ್ಲಿ ಕೊಲೆ ಮಾಡಿದ್ದಾನೆ. ಹರ್ಷದ್ ಮತ್ತು ಹಕೀಂ ಪೆರುಮತ್ತೋಡಿ ಗ್ರಾಮದಲ್ಲಿ ಮನೆ ಮಾಡಿಕೊಂಡು ಒಟ್ಟಿಗೆ ಇದ್ದರು. ಅಷ್ಟೇ ಅಲ್ಲದೇ ಇಬ್ಬರು ಕೇಬಲ್ ವರ್ಕ್ ಮಾಡುತ್ತಿದ್ದರು.

ಹಕೀಂ ಅಲ್ಲಿ ಒಂದು ನಾಯಿಯನ್ನು ಸಾಕಿದ್ದ. ಆ ನಾಯಿಗೆ ಆಹಾರವನ್ನು ನೀಡಿಲ್ಲ ಎಂದು ಹರ್ಷದ್ಗೆ ನಾಯಿ ಬೆಲ್ಟ್ ಹಾಗೂ ಮರದ ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ. ಈ ವೇಳೆ ಹರ್ಷದ್ಗೆ ಗಂಭೀರ ಗಾಯವಾಗಿದೆ.

ಈ ಹಿನ್ನೆಲೆಯಲ್ಲಿ ಹೆದರಿದ ಹಕೀಂ ಹಾಗೂ ಆತನ ಸ್ನೇಹಿತರಿಬ್ಬರು ಹರ್ಷದ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದಾದ ಬಳಿಕ ಹಕೀಂ ಆಸ್ಪತ್ರೆ ವೈದ್ಯರ ಬಳಿ ಹರ್ಷದ್ ಮೇಲ್ಛಾವಣಿಯಿಂದ ಬಿದ್ದಿದ್ದರಿಂದ ಈ ರೀತಿ ಆಗಿದೆ ಎಂದು ಸುಳ್ಳು ಹೇಳಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ : ಜನಾರ್ದನ್ ಮಿಶ್ರಾ