Publish Date: Thu, 13 Jan 2022 (09:00 IST)
Updated Date: Thu, 13 Jan 2022 (09:16 IST)
ತಿರುವನಂತಪುರಂ: ಆಂಬ್ಯುಲೆನ್ಸ್ ಇರುವುದು ತುರ್ತು ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು. ಆದರೆ ಈ ತುರ್ತು ಸೇವೆ ಒದಗಿಸುವ ವಾಹವನ್ನು ದುರ್ಬಳಕೆ ಮಾಡಿದರೆ ಏನಾಗುತ್ತದೆ? ಅಂತಹ ಘಟನೆಗೆ ಕೇರಳ ಸಾಕ್ಷಿಯಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವರ ಮತ್ತು ಆತನ ನವವಧುವನ್ನು ಕೂರಿಸಿಕೊಂಡು ಆಂಬ್ಯುಲೆನ್ಸ್ ಚಾಲಕನೊಬ್ಬ ಮದುವೆ ಮನೆಗೆ ಹೋಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ತುರ್ತು ಸೇವೆಯ ವಾಹವನ್ನು ಈ ರೀತಿ ದುರ್ಬಳಕೆ ಮಾಡಿರುವುದರ ವಿರುದ್ಧ ಈಗ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ವಾಹನ ಚಾಲಕನ ಪರವಾನಗಿಯನ್ನೇ ರದ್ದುಗೊಳಿಸಲು ಮುಂದಾಗಿದ್ದಾರೆ. ಆದರೆ ತಾನು ವಧು-ವರರನ್ನು ಮುಂದಿನ ಸೀಟ್ ನಲ್ಲಿ ಕೂರಿಸಿಕೊಂಡಿದ್ದೆ. ಆಂಬ್ಯುಲೆನ್ಸ್ ನ ಸೈರನ್ ಹಾಕಿರಲಿಲ್ಲ ಎಂದು ಚಾಲಕ ವಾದಿಸುತ್ತಿದ್ದಾನೆ. ಆದರೆ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.