Select Your Language

Notifications

webdunia
webdunia
webdunia
webdunia

ಬಿಎಂಟಿಸಿ ಬಸ್‌ ಮುಖಾಮುಖಿ ಡಿಕ್ಕಿ

BMTC
ಬೆಂಗಳೂರು , ಸೋಮವಾರ, 4 ಜುಲೈ 2016 (15:49 IST)
ಬಿಎಂಟಿಸಿ ಬಸ್‌ಗಳ ನಡುವೆ ನಡೆದ ಮುಖಾಮುಖ ಡಿಕ್ಕಿಯಲ್ಲಿ ಎರಡು ಬಸ್‌ಗಳ ಚಾಲಕರು ಸೇರಿದಂತೆ  ಆರು ಜನ ಗಾಯಗೊಂಡ ಘಟನೆ ನಾಗವಾರ ಜಂಕ್ಷನ್ ಬಳಿ ನಡೆದಿದೆ.

 
ರಾಮಮೂರ್ತಿ ನಗರದಿಂದ ಹೆಬ್ಬಾಳದ ಕಡೆ ಹೋಗುತ್ತಿದ್ದ ಬಸ್ ಮತ್ತು ಶಿವಾಜಿ ನಗರದಿಂದ ಯಲಹಂಕಕ್ಕೆ ಹೋಗುತಿದ್ದ ಬಸ್‌ ಇಂದು ಮುಂಜಾನೆ ಒಂದಕ್ಕೊಂಡು ಘರ್ಷಿಸಿವೆ. 
 
ಸ್ಥಳದಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿಲ್ಲದಿರುವುದು ಮತ್ತು  ಅತಿ ವೇಗದ ಚಾಲನೆ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಘಟನೆಯಿಂದ ಸ್ಥಳದಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.  
 
ಹೆಬ್ಬಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡೂ ಬಸ್‌ಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಖುರಾನ್ ಸುಟ್ಟ ಪ್ರಕರಣದಲ್ಲಿ ಆಪ್ ಶಾಸಕ