Select Your Language

Notifications

webdunia
webdunia
webdunia
webdunia

ಖುರಾನ್ ಸುಟ್ಟ ಪ್ರಕರಣದಲ್ಲಿ ಆಪ್ ಶಾಸಕ

ಖುರಾನ್
ನವದೆಹಲಿ , ಸೋಮವಾರ, 4 ಜುಲೈ 2016 (15:31 IST)
ಆಮ್ ಆದ್ಮಿ ಪಕ್ಷದ ಶಾಸಕರು ಪ್ರತಿದಿನವೆಂಬಂತೆ ವಿವಾದದಲ್ಲಿ ಸಿಲುಕುತ್ತಿದ್ದಾರೆ. ಇದಕ್ಕೊಂದು ಹೊಸ ಸೇರ್ಪಡೆ ನರೇಶ್ ಯಾದವ್.   ಪಂಜಾಬ್‌ನಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪ ಅವರನ್ನೀಗ ಇಕ್ಕಟ್ಟಿಗೆ ಸಿಲುಕಿಸಿದೆ.

ಜೂನ್ 24 ರಂದು ಪಂಜಾಬ್‌ನ ಮಲೇರ್‌ಕೋಟ್ಲಾದಲ್ಲಿ  ಖುರಾನ್ ಅನ್ನು ಸುಟ್ಟು ಹಾಕಿರುವ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಕುಮಾರ್ ಆಪ್ ಶಾಸಕ ನರೇಶ್ ಯಾದವ್ ಕುಮ್ಮಕ್ಕಿನಿಂದ ಈ ಕೃತ್ಯವನ್ನು ನಡೆಸಿದ್ದೆ. ಈ ಕೃತ್ಯವನ್ನೆಸಗಿದರೆ ಒಂದು ಕೋಟಿ ರುಪಾಯಿಗಳನ್ನು ನೀಡುವುದಾಗಿ ಅವರು ನನ್ನ ಜತೆ ಡೀಲ್ ನಡೆಸಿದ್ದರು ಎಂದು ಪಂಜಾಬ್‌ನ ಸಂಗ್ರೂರ್ ಪೊಲೀಸರು ವಿಚಾರಣೆ ಸಮಯದಲ್ಲಿ ಆರೋಪಿಸಿದ್ದಾನೆ. 
 
ದೀನಾನಗರ್‌ ಮತ್ತು ಪಠಾಣ್‌ಕೋಟ್‌ ದಾಳಿಯ ಸೇಡು ತೀರಿಸಿಕೊಳ್ಳುವ ಸಲುವಾಗಿ ಈ ಕೃತ್ಯ ಎಸಗಾಗಿದ್ದು, ನಾವು ಪಾಕಿಸ್ತಾನ ಮತ್ತು ಮುಸ್ಲಿಂ ವಿರೋಧಿಗಳು ಎಂದಾತ ಹೇಳಿದ್ದಾನೆ. ಘಟನೆಯಲ್ಲಿ ಒಟ್ಟು ಮೂವರನ್ನು ಬಂಧಿಸಲಾಗಿದೆ. 
 
ಧರ್ಮಗ್ರಂಥವನ್ನು ಅಪವಿತ್ರಗೊಳಿಸಿ ದಂಗೆಗೆ ಕಾರಣವಾಗುವಂತಹ ಕೆಲಸಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ನರೇಶ್‌ ಯಾದವ್‌  ಅವರನ್ನು ಬಂಧಿಸುವ ಸಾಧ್ಯತೆಗಳಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಆಪ್ತ ಮರಿಗೌಡ ಬಂಧನಕ್ಕೆ ಶೋಭಾ ಕರಂದ್ಲಾಜೆ ಆಗ್ರಹ