Select Your Language

Notifications

webdunia
webdunia
webdunia
webdunia

ಸೀಮೆಎಣ್ಣೆ ಸುರಿದು ಶಾಸಕನ ಸಜೀವ ದಹನ ಯತ್ನ

ಸೀಮೆಎಣ್ಣೆ ಸುರಿದು ಶಾಸಕನ ಸಜೀವ ದಹನ ಯತ್ನ
ಕೋಟಾ , ಶುಕ್ರವಾರ, 27 ಜನವರಿ 2017 (14:16 IST)
20 ವರ್ಷದ ಯುವಕನೋರ್ವ ಬಿಜೆಪಿ ಶಾಸಕನನ್ನು ಸಜೀವವಾಗಿ ಸುಡಲೆತ್ನಿಸಿದ ಬೆಚ್ಚಿ ಬೀಳಿಸುವ ಘಟನೆ ರಾಜಸ್ಥಾನದ ಬರನ್ ಜಿಲ್ಲೆಯಲ್ಲಿ ನಡೆದಿದೆ. 
ಬರನ್ ಶಾಸಕ ಅತ್ರು ರಾಮ್‌ಪಾಲ್ ಮೇಘವಾಲ್ ಬುಧವಾರ ಸಂಜೆ ನಗರಕ್ಕೆ ಭೇಟಿ ನೀಡಿದ್ದರು. ಏಕಾಏಕಿ ಅವರ ಸನಿಹಕ್ಕೆ ಬಂದ ಯುವಕನೋರ್ವ ಜನರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದ ಮೇಘವಾಲ್ ಮೇಲೆ ಹೊತ್ತಿ ಉರಿಯುವಂತ ಎಣ್ಣೆಯನ್ನು ತೋಕಿದ್ದಾನೆ. ಬಳಿಕ ಬೆಂಕಿಕಡ್ಡಿ ಗೀರಲು ಯತ್ನಿಸುತ್ತಿದ್ದ ಆತನನ್ನು ತಕ್ಷಣ ಶಾಸಕರ ಬೆಂಬಲಿಗರು ಆತನನ್ನು ಎಳೆದು ನಡೆಯಲಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. 
 
ಆರೋಪಿಯನ್ನು ಚರವ್ ಸಕ್ಷೇನಾ ಎಂದು ಗುರುತಿಸಲಾಗಿದ್ದು  ಪರಾರಿಯಾಗಿರುವ ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 
 
ಈ ಕುರಿತು ಪ್ರತಿಕ್ರಿಯಿಸಿರುವ ಮೇಘವಾಲ್, 'ಇದು ರಾಜಕೀಯ ಪ್ರೇರಿತ ಪಿತೂರಿ' ಎಂದಿದ್ದಾರೆ. 
 
ಶಾಸಕ ನೀಡಿರುವ ದೂರಿನ ಅನ್ವಯ ಪೊಲೀಸರು ಹತ್ಯೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಮಪಾತ: ವೀರಯೋಧ ಸಂದೀಪ್ ಶೆಟ್ಟಿ ಮೃತದೇಹ ತವರಿಗೆ