Select Your Language

Notifications

webdunia
webdunia
webdunia
webdunia

ತಾಕತ್ತಿದ್ದರೆ ವಿಹೆಚ್‌ಪಿ ಸಭೆ ತಡೆಯಿರಿ: ಬಿಹಾರ್ ಸರ್ಕಾರಕ್ಕೆ ಬಿಜೆಪಿ ಧಮ್ಕಿ

BJP
ಪಾಟ್ಣಾ , ಶುಕ್ರವಾರ, 24 ಜೂನ್ 2016 (15:14 IST)
ಒಂದು ಮಹತ್ವದ ಬೆಳವಣಿಗೆಯೊಂದರಲ್ಲಿ ಪಾಟ್ಣಾದಲ್ಲಿ ನಡೆಯಲಿರುವ ವಿಶ್ವ ಹಿಂದೂ ಪರಿಷತ್ ಸಭೆಗೆ ನಿರ್ಬಂಧ ಹೇರುವಂತೆ ಬಿಜೆಪಿ ಬಿಹಾರ್ ಸರ್ಕಾರಕ್ಕೆ ಸವಾಲು ಹಾಕಿದೆ. 

ಸಭೆಯಲ್ಲಿ ವಿಹೆಚ್‌ಪಿ ನಾಯಕ ಪ್ರವೀಣ್ ತೊಗಾಡಿಯಾ ಪ್ರಚೋದನಾಕಾರಿ ಅಥವಾ ದ್ವೇಷದ ಭಾಷಣ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಹಾರ್ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಅವರಿಗೆ ಈ ಪರಿಯಲ್ಲಿ ಧಮ್ಕಿ ಹಾಕಿದೆ. 
 
ವಿಹೆಚ್‌ಪಿಗೆ ನಿರ್ಬಂಧ ಹೇರಿ ಎಂದು ಬಿಜೆಪಿ ರಾಜ್ಯ ಸರ್ಕಾರಕ್ಕೆ ಸವಾಲು ಹಾಕುತ್ತದೆ ಎಂದು ಬಿಜೆಪಿ ನಾಯಕ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ. 
 
ಸ್ವಯಂ ಪ್ರಚಾರಕ್ಕಾಗಿ ಬಿಹಾರ್ ಸತಿವರು ವಿಹೆಚ್‌ಪಿ ಮತ್ತು ತೊಗಾಡಿಯಾ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಸುಶೀಲ್ ಕುಮಾರ್ ಆರೋಪಿಸಿದ್ದಾರೆ, 
 
ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿ ಆಡಳಿತದಲ್ಲಿದ್ದಾಗ ತೊಗಾಡಿಯಾಗೆ ಬಿಹಾರ್ ಪ್ರವೇಶಿಸಲು ಬಿಟ್ಟಿರಲಿಲ್ಲ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಅಜ್ಜನ ಪರಿಶ್ರಮ ನೋಡಿ ನೀವು ಮೂಕರಾಗುವುದು ಖಂಡಿತ (ವಿಡಿಯೋ)