Webdunia - Bharat's app for daily news and videos

Install App

ರಾಮ ಸೀತೆಗೇ ಅಯೋಧ್ಯೆಯಲ್ಲಿ ಅನ್ಯಾಯವಾಗಿರುವಾಗ ಬಿಜೆಪಿ ಯಾವ ಲೆಕ್ಕ

Krishnaveni K
ಗುರುವಾರ, 6 ಜೂನ್ 2024 (14:58 IST)
ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಸಿಕ್ಕ ಸೋಲು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಬಗ್ಗೆ ಬಿಜೆಪಿ ಬೆಂಗಲಿಗರೂ ಸೋಷಿಯಲ್ ಮೀಡಿಯಾಗಳಲ್ಲಿ ವಿಶ್ಲೇಷಣೆ ನಡೆಸುತ್ತಿದ್ದಾರೆ.

500 ವರ್ಷಗಳ ಹೋರಾಟದ ಬಳಿಕ ಮೊನ್ನೆಯಷ್ಟೇ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡಿದ್ದು ಬಿಜೆಪಿಯ ಹೆಗ್ಗಳಿಕೆಯಾಗಿತ್ತು. ಹೀಗಾಗಿ ಈ ಬಾರಿ ಗೆಲುವು ನಮ್ಮದೇ ಎನ್ನುವ ಆತ್ಮವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದರು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಗೆ ಅಲ್ಲಿ ಸೋಲಾಗಿತ್ತು.
ಹೀಗಾಗಿ ಇಷ್ಟೆಲ್ಲಾ ಅಯೋಧ್ಯೆಗೆ ಅಭಿವೃದ್ಧಿ ತಂದರೂ ಜನ ಬಿಜೆಪಿಯನ್ನೇ ಸೋಲಿಸಿದರಲ್ಲ ಎಂದು ಬಿಜೆಪಿ ಬೆಂಬಗಲಿಗರು ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ. ಜೊತೆಗೆ ಈ ಹಿಂದೆ ತ್ರೇತಾಯುಗದಲ್ಲಿ ರಾಮಸೀತೆಗೇ ಅಯೋಧ್ಯೆಯಲ್ಲಿ ಅನ್ಯಾಯವಾಗಿರುವಾಗ ಬಿಜೆಪಿ ಯಾವ ಲೆಕ್ಕ ಎಂದು ಕೆಲವರು ಸಮಾಧಾನಪಟ್ಟುಕೊಂಡಿದ್ದಾರೆ.

ಇದರ ಜೊತೆಗೆ ಲಲ್ಲು ಸಿಂಗ್ ಈ ಹಿಂದೆ ಶಾಸಕರಾಗಿದ್ದಾಗಲೂ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಅವರನ್ನು ಅಲ್ಲಿ ಅಭ್ಯರ್ಥಿಯಗಿ ಕಣಕ್ಕಿಳಿಸುವುದಕ್ಕೆ ಸ್ಥಳೀಯರಿಂದಲೇ ವಿರೋಧವಿತ್ತು. ಹಾಗಿದ್ದರೂ ಕಣಕ್ಕಿಳಿಸಿದ್ದರಿಂದಲೇ ಸೋತರು ಎಂಬ ಮಾತು ಕೇಳಿಬರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments