Select Your Language

Notifications

webdunia
webdunia
webdunia
webdunia

ಮುಂಗಾರು ಅಧಿವೇಶನಕ್ಕೆ ಸಚಿವ ಅರುಣ್ ಜೇಟ್ಲಿ ಗೈರು: ಹೊಸ ನಾಯಕನ ಹುಡುಕಾಟದಲ್ಲಿ ಬಿಜೆಪಿ

ಮುಂಗಾರು ಅಧಿವೇಶನಕ್ಕೆ ಸಚಿವ ಅರುಣ್ ಜೇಟ್ಲಿ ಗೈರು: ಹೊಸ ನಾಯಕನ ಹುಡುಕಾಟದಲ್ಲಿ ಬಿಜೆಪಿ
ನವದೆಹಲಿ , ಸೋಮವಾರ, 16 ಜುಲೈ 2018 (10:13 IST)
ನವದೆಹಲಿ: ಈ ಬಾರಿ ಮುಂಗಾರು ಅಧಿವೇಶನಕ್ಕೆ ರಾಜ್ಯಸಭೆ ನಾಯಕ ಸಚಿವ ಅರುಣ್ ಜೇಟ್ಲಿ ಗೈರು ಹಾಜರಾಗಲಿದ್ದಾರೆ. ಅವರ ಬದಲಿಗೆ ರಾಜ್ಯಸಭೆ ನಾಯಕ ಸ್ಥಾನಕ್ಕೆ ಬಿಜೆಪಿ ಹೊಸ ನೇತಾರರ ಹುಡುಕಾಟದಲ್ಲಿದೆ.

ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಅರುಣ್ ಜೇಟ್ಲಿಗೆ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜುಲೈ 18 ರಿಂದ ಆಗಸ್ಟ್ 10 ರವರೆಗೆ ನಡೆಯಲಿರುವ ಮುಂಗಾರು ಅಧಿವೇಶನ ತಪ್ಪಿಸಿಕೊಳ್ಳಲಿದ್ದಾರೆ.

ಈಗಾಗಲೇ ಅರುಣ್ ಜೇಟ್ಲಿ ನಿಭಾಯಿಸುತ್ತಿರುವ ರಾಜ್ಯಸಭೆ ನಾಯಕ ಸ್ಥಾನವನ್ನು ಸಚಿವ ಪಿಯೂಷ್ ಗೋಯೆಲ್ ನಿಭಾಯಿಸುತ್ತಿದ್ದಾರೆ. ಆದರೆ ರಾಜ್ಯಸಭೆ ಅಧಿವೇಶನ ಆರಂಭವಾಗುವ ಹೊತ್ತಿಗೆ ಬಿಜೆಪಿ ಈ ಸ್ಥಾನಕ್ಕೆ ತಾತ್ಕಾಲಿಕವಾಗಿ ಇನ್ನೊಬ್ಬ ನಾಯಕನನ್ನು ಆರಿಸಬೇಕಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿ ಪ್ರಧಾನಿಯಾಗುವುದಕ್ಕೆ ನಮ್ಮ ತಕಾರಾರಿಲ್ಲ: ಎಚ್ ಡಿ ದೇವೇಗೌಡ