Select Your Language

Notifications

webdunia
webdunia
webdunia
webdunia

ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಮಿತ್ ಶಾ ಔತಣಕೂಟ: ನಟ ಚಿರಂಜೀವಿ ಕುಟುಂಬ ಭಾಗಿ

Chiranjeevi

Sampriya

ನವದೆಹಲಿ , ಶುಕ್ರವಾರ, 10 ಮೇ 2024 (17:41 IST)
Photo Courtesy X
ನವದೆಹಲಿ:   ಖ್ಯಾತ ನಟ, ರಾಜಕಾರಣಿ ಚಿರಂಜೀವಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಅವರ ಪತ್ನಿ ಸುರೇಖಾ, ಮಗ ರಾಮ್ ಚರಣ್, ಮಗಳು ಸುಶ್ಮಿತಾ, ಸೊಸೆ ಉಪಾಸನಾ ಕೊನಿಡೇಲಾ ಉಪಸ್ಥಿತರಿದ್ದರು. ಸಮಾರಂಭದ ನಂತರ ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ನಿವಾಸದಲ್ಲಿ ಔತಣಕೂಟ ಏರ್ಪಡಿಸಿದ್ದರು.

ಇನ್ನೂ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರು ನಟ ಚಿರಂಜೀವಿ ಮತ್ತು ರಾಮ್ ಚರಣ್‌ಗೆ  ಶುಭಾಶಯ ಕೋರಿದರು.

ಸಚಿವರ ನಿವಾಸದಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರು ಹರಟೆ ಹೊಡೆಯುತ್ತಿರುವ ವಿಡಿಯೋವನ್ನು ಎಎನ್‌ಐ ಹಂಚಿಕೊಂಡಿದೆ. ಉಪಾಸನಾ, ರಾಮ್ ಮತ್ತು ಸುಶ್ಮಿತಾ ಒಬ್ಬರಿಗೊಬ್ಬರು ಮಾತನಾಡುವುದನ್ನು ಮತ್ತು ಆಹಾರವನ್ನು ಸವಿಯುವುದನ್ನು ಕಾಣಬಹುದು.

ಹೈದರಾಬಾದ್‌ಗೆ ಮರಳಿದ ಚಿರಂಜೀವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಪದ್ಮವಿಭೂಷಣ ಸಿಗುವಲ್ಲಿ ಕೈಜೋಡಿಸಿರುವುದಕ್ಕೆ ನನ್ನ ನಿರ್ದೇಶಕರು, ಸಹನಟರಿಂದ ಹಿಡಿದು ನಿರ್ಮಾಪಕರವರೆಗೂ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಹೇಳಿದರು. ಹಲವು ವರ್ಷಗಳ ಕಠಿಣ ಕೆಲಸವನ್ನು ಸರ್ಕಾರ  ಗುರುತಿಸಿ  ಪ್ರಶಸ್ತಿ ನೀಡಿದೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ಪ್ಯಾಂಟ್‌ ಕಳಚದಂತೆ ಡಿಸೈನ್ ಮಾಡಬೇಕು: ಕಾಂಗ್ರೆಸ್ ಲೇವಾಡಿ