Webdunia - Bharat's app for daily news and videos

Install App

ಸುಧಾರಿತ ಜೀವನ ನಡೆಸಲು ಲೈಂಗಿಕ ಕ್ರಿಯೆಯಲ್ಲಿ 669 ಸೂತ್ರ ಪಾಲಿಸಿ ಎಂದ ಅಲಿಬಾಬ ಕಂಪೆನಿ ಸಂಸ್ಥಾಪಕ

Webdunia
ಬುಧವಾರ, 15 ಮೇ 2019 (07:25 IST)
ನವದೆಹಲಿ : ಸುಧಾರಿತ ಜೀವನ ನಡೆಸಲು ವಾರದಲ್ಲಿ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ 669 ಸೂತ್ರ ಪಾಲಿಸಿ ಎನ್ನುವ ಮೂಲಕ ಚೀನಾ ಮೂಲದ ಅಲಿಬಾಬ ಕಂಪೆನಿ ಸಂಸ್ಥಾಪಕ ಜಾಕ್ ಮಾ ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.




ಈ ಹಿಂದೆ ಅಲಿಬಾಬ ಕಂಪನಿಯ ಆಂತರಿಕ ಸಭೆಯೊಂದರಲ್ಲಿ ಮಾತನಾಡಿದ ಜಾಕ್​​ ಮಾ, ದಿನಕ್ಕೆ 12 ಗಂಟೆಗಳಂತೆ ವಾರದ 6 ದಿನಗಳಲ್ಲಿ ಶ್ರಮಿಸಬಲ್ಲ ಉದ್ಯೋಗಿಗಳು ಮಾತ್ರ ತಮ್ಮ ಕಂಪನಿಗೆ ಬೇಕು, ಉಳಿದವರಿಗೆ ಇಲ್ಲಿ ಜಾಗವಿಲ್ಲ ಎಂದಿದ್ದರು. ಅಲ್ಲದೇ ಚೀನಾದ ತಂತ್ರಜ್ಞಾನ ಕಂಪನಿಗಳ ವಲಯದಲ್ಲಿ '996 ಗಂಟೆ ದುಡಿಯುವ ಸಿಸ್ಟಮ್‌' ಚಾಲ್ತಿಯಲ್ಲಿದೆ. ಅಂದರೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಗಳ ಕಾಲ ವಾರದ 6 ದಿನಗಳ ದುಡಿಮೆ ಅರ್ಥ ಇದಾಗಿದೆ ಎಂದಿದ್ದರು. ದಿನಕ್ಕೆ '996' ರೀತಿಯಲ್ಲಿ ದುಡಿಯುವ ಸಾಮರ್ಥ್ಯ‌ ಯುವಜನತೆಗೆ ಇರುವುದು ದೊಡ್ಡ ಆಶೀರ್ವಾದ. ಇದನ್ನು ನಾವು ಬಳಸಿಕೊಳ್ಳಬೇಕು ಎಂದು ಜಾಕ್ ಮಾ ಹೇಳಿದ್ದರು.


ಆದರೆ ಚೀನಾದ ಕಾರ್ಮಿಕ ಕಾನೂನುಗಳ ಪ್ರಕಾರ ದಿನಕ್ಕೆ 8 ಗಂಟೆಗಿಂತ ಹೆಚ್ಚು ಕಾಲ ಸಿಬ್ಬಂದಿಯನ್ನು ದುಡಿಸುವಂತಿಲ್ಲ.ಆದ್ದರಿಂದ ಜಾಕ್ ಮಾ ಅವರ ಈ ಹೇಳಿಕೆ ಕುರಿತು ಚೀನಾ ಜನತೆ ಬಾರೀ ವಿರೋಧ ವ್ಯಕ್ತಪಡಿಸಿದ್ದರು.
ಆದರೆ ಇದೀಗ ಅಲಿಬಾಬ ಸಂಸ್ಥೆಯ ಸಿಬ್ಬಂದಿಗಳ ವಿವಾಹ ಸಮಾರಂಭದಲ್ಲಿ ಮಾತನಾಡಿದ್ದ ಜಾಕ್​​ ಮಾ,  ಮನೆ ಮತ್ತು ಕೆಲಸ ಎರಡನ್ನೂ ಹೊಂದಾಣಿಕೆ ಮಾಡಿಕೊಂಡು ಸುಧಾರಿತ ಜೀವನ ನಡೆಸಲು ವಾರದಲ್ಲಿ 6 ದಿನ, 6 ಸಲ ಲೈಂಗಿಕ ಕ್ರಿಯೆ ನಡೆಸಿ 669 ಸೂತ್ರ ಪಾಲಿಸಿ ಎಂದು ತಮ್ಮ ಸಿಬ್ಬಂದಿಗಳಿಗೆ ಸಲಹೆ ನೀಡಿ ಇದೀಗ ಮತ್ತೆ ವಿವಾದಕ್ಕೀಡಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ದೇವೇಗೌಡರನ್ನ ಭೇಟಿಯಾದ ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ

ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್‌, ಇಳಿಕೆಯತ್ತ ಚಿನ್ನದ ದರ

ರೇಖಾ ಗುಪ್ತಾ ಮೇಲೆ ಕಪಾಳಮೋಕ್ಷ: ಆರೋಪಿ ವಿರುದ್ಧ ದಾಖಲಾಯಿತು ದೊಡ್ಡ ಕೇಸ್‌

ಪ್ರಚೋದನಕಾರಿ ಹೇಳಿಕೆ: ಬಸನಗೌಡ ಪಾಟೀಲ ವಿರುದ್ಧ ಎಫ್‌ಐಆರ್‌

ಕಾಂಗ್ರೆಸ್‌ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ: ಆರ್‌ ಅಶೋಕ್ ಗರಂ

ಮುಂದಿನ ಸುದ್ದಿ