Select Your Language

Notifications

webdunia
webdunia
webdunia
webdunia

ನಡುಬೀದಿಯಲ್ಲೇ ಅಣ್ಣಾಡಿಎಂಕೆ ಮುಖಂಡನ ಬರ್ಬರ ಹತ್ಯೆ

ನಡುಬೀದಿಯಲ್ಲೇ ಅಣ್ಣಾಡಿಎಂಕೆ ಮುಖಂಡನ ಬರ್ಬರ ಹತ್ಯೆ
ತಿರುವಣಮಲೈ , ಭಾನುವಾರ, 12 ಫೆಬ್ರವರಿ 2017 (19:14 IST)
ಅಣ್ಣಾಡಿಎಂಕೆ ಸದಸ್ಯನನ್ನ ನಡುಬೀದಿಯಲ್ಲಿ ಕೊಚ್ಚಿ ಕೊಂದಿರುವ ಭೀಕರ ಘಟನೆ ದೇಗುಲಗಳ ನಗರ ತಿರುವಣಮಲೈನಲ್ಲಿ ನಡೆದಿದೆ. ಎಐಎಡಿಎಂಕೆ ಸದಸ್ಯ ಸ್. ಕನಗರಾಜ್ ಮೃತ ದುರ್ದೈವಿ. ಹತ್ಯೆಗೈದವರು ಡಿಎಂಕೆ ಸದಸ್ಯರು ಎನ್ನಲಾಗಿದೆ. ಹಣದ ವ್ಯವಹಾರವೇ ಕೊಲೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಸನ್ನಿಧಿ ಸ್ಟ್ರೀಟ್ ನಿವಾಸಿಯಾಗಿರುವ ಕನಗರಾಜ್ ಬ್ಯಾಡ್ಮಿಂಟನ್ ಪ್ರಾಕ್ಟೀಸ್ ಮುಗಿಸಿ ಮನೆಗೆ ಬೈಕ್`ನಲ್ಲಿ ತೆರಳುತ್ತಿದ್ದಾಗ ಅಡ್ಡ ಗಟ್ಟಿ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿದೆ. ಹತ್ಯೆ ಬಳಿಕ ರೋಪಿಗಳಾದ ಬಾಬು, ರಾಜಾ, ಸರವಣನ್ ಪೊಲೀಸರಿಗೆ ಶರಣಾಗಿದ್ದಾರೆ.

ವರ್ಷದ ಹಿಂದೆ ಈ ಮೂವರೂ ಕನಗರಾಜುಗೆ 5 ಕೋಟಿ ರೂಪಾಯಿಗೆ ಭೂಮಿ ಮಾರಿದ್ದರು. ಆ ಭೂಮಿಯನ್ನ 3ನೇ ವ್ಯಕ್ತಿಗೆ ಮಾರಿದ್ದ ಕನಗರಾಜು ಒಪ್ಪಂದದಂತೆ ಹಣ ಹಿಂದಿರುಗಿಸಿರಲಿಲ್ಲ. ಹಲವು ಬಾರಿ ಮನವಿ ಮಾಡಿದ್ದರೂ ಹಣ ಕೊಟ್ಟಿರಲಿಲ್ಲ. ಇದರಿಂದ ರೋಸಿಹೋಂದ  ಮೂವರು ಹತ್ಯೆಗೈದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

3 ವರ್ಷ ಗರ್ಭ ಧರಿಸಿದ್ದ ಮಹಿಳೆ.. ಹುಟ್ಟಿದ್ದು ಮಗುವಲ್ಲ ಮತ್ತೇನು ಗೊತ್ತಾ..?