Select Your Language

Notifications

webdunia
webdunia
webdunia
webdunia

ಅಧಿಕಾರ ಕ್ಷಣಿಕ, ಸತ್ಯ ಮಾತ್ರ ಕೊನೆಯವರೆಗೆ ಶಾಶ್ವತ: ಪೊನ್ನು ಸ್ವಾಮಿ

ಅಧಿಕಾರ ಕ್ಷಣಿಕ, ಸತ್ಯ ಮಾತ್ರ ಕೊನೆಯವರೆಗೆ ಶಾಶ್ವತ: ಪೊನ್ನು ಸ್ವಾಮಿ
ಚೆನ್ನೈ , ಶುಕ್ರವಾರ, 10 ಫೆಬ್ರವರಿ 2017 (13:13 IST)
ಅಧಿಕಾರ ಕ್ಷಣಿಕ, ಸತ್ಯ ಮಾತ್ರ ಕೊನೆಯವರೆಗೆ ಶಾಶ್ವತವಾಗಿರುವುದರಿಂದ ಸಿಎಂ ಪನ್ನೀರ್ ಸೆಲ್ವಂ ಅವರನ್ನು ಬೆಂಬಲಿಸಿ ಎಂದು ಕೇಂದ್ರದ ಮಾಜಿ ಸಚಿವ ಪೋನ್ನು ಸ್ವಾಮಿ ಎಐಎಡಿಎಂಕೆ ಶಾಸಕರಿಗೆ ಕರೆ ನೀಡಿದ್ದಾರೆ.
 
ಶಾಸಕರು ಯಾರಿಗೂ ಭಯಪಡುವ ಅಗತ್ಯವಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಂಡು ಸೆಲ್ವಂ ಅವರಿಗೆ ಬೆಂಬಲ ನೀಡಿ ಎಂದು ಸಲಹೆ ನೀಡಿದ್ದಾರೆ. 
 
ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ, ಶಶಿಕಲಾ ಮತ್ತು ಅವರ ಬೆಂಬಲಿಗರಿಗೆ ಹೆದರುವ ಅಗತ್ಯವಿಲ್ಲ. ನಮ್ಮ ಜೊತೆ ಬನ್ನಿ ಎಂದು ಮನವಿ ಮಾಡಿದ್ದಾರೆ.
 
ಶಶಿಕಲಾ ಬೆಂಬಲಿತ ಶಾಸಕರನ್ನು ಕೋವಲಂ ಬೀಚ್ ರೆಸಾರ್ಟ್‌ನಿಂದ ಮಹಾಬಲಿಪರಂ ರೆಸಾರ್ಟ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ. ಇಂದು ಸಂಜೆಯೊಳಗೆ ರಾಜ್ಯಪಾಲರು ತಮ್ಮ ತೀರ್ಮಾನ ಪ್ರಕಟಿಸಲಿರುವುದರಿಂದ ಅಲ್ಲಿಯವರೆಗೆ ಪನ್ನೀರ್ ಸೆಲ್ವಂ ಮತ್ತು ಶಶಿಕಲಾ ಕಾಯಬೇಕಾಗಿರುವುದು ಅನಿವಾರ್ಯವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಟೇಕಾಫ್ ಆದ ಕೂಡಲೇ ವಿಮಾನದ ರೆಕ್ಕೆಗೆ ಹೊತ್ತಿಕೊಂಡ ಬೆಂಕಿ