Webdunia - Bharat's app for daily news and videos

Install App

ಚಲಿಸುತ್ತಿದ್ದ ಟ್ರಕ್ ಗೆ ಸಿಲುಕಿದ ಬೈಕ್, ಆಗ್ರಾ ಹೆದ್ದಾರಿಯಲ್ಲಿ ನಡೆದ ಎದೆ ನಡುಗಿಸುವ ವಿಡಿಯೋ

Krishnaveni K
ಮಂಗಳವಾರ, 24 ಡಿಸೆಂಬರ್ 2024 (14:01 IST)
ಆಗ್ರಾ: ಬೃಹತ್ ಗಾತ್ರದ ಟ್ರಕ್ ನ ಮುಂದಿನ ಚಕ್ರಕ್ಕೆ ಸಿಲುಕಿರುವ ಇಬ್ಬರು ಯುವಕರು ಪ್ರಾಣ ಭೀತಿಯಲ್ಲೇ ಕಿರುಚಾಡುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆ ಆಗ್ರಾದ ಹೆದ್ದಾರಿಯಲ್ಲಿ ನಡೆದಿದೆ ಎನ್ನಲಾಗಿದೆ. ರಾತ್ರಿ ಊಟ ಮುಗಿಸಿಕೊಂಡು ಜಾಕಿರ್ ಎಂಬಾತ ತನ್ನ ಸ್ನೇಹಿತನನ್ನು ಕೂರಿಸಿಕೊಂಡು ತೆರಳುತ್ತಿದ್ದಾಗ ಆತನ ಬೈಕ್ ಅಕಸ್ಮಾತ್ತಾಗಿ ಬೃಹತ್ ಗಾತ್ರದ ಟ್ರಕ್ ನ ಮುಂಭಾಗಕ್ಕೆ ಸಿಕ್ಕಿಹಾಕಿಕೊಂಡಿದೆ. ಟ್ರಕ್ ನ ಮುಂಭಾಗದ ಟಯರ್ ನಡುವೆ ಬೈಕ್ ಸಮೇತ ಇಬ್ಬರು ಯುವಕರು ಸಿಕ್ಕಿಹಾಕಿಕೊಂಡಿದ್ದರೂ ತಿಳಿಯದ ಟ್ರಕ್ ಡ್ರೈವರ್ ನಿಲ್ಲಿಸದೇ ಚಾಲನೆ ಮಾಡಿದ್ದಾನೆ.

ಇಬ್ಬರು ಯುವಕರು ಪ್ರಾಣಭೀತಿಯಿಂದ ನಿಲ್ಲಿಸು ಎಂದು ಎಷ್ಟೇ ಕಿರುಚಾಡಿದರೂ ಟ್ರಕ್ ಡ್ರೈವರ್ ನಿಲ್ಲಿಸಿಲ್ಲ. ಪಕ್ಕದಲ್ಲೇ ಸಾಗುತ್ತಿದ್ದ ಇನ್ನೊಂದು ಬೈಕ್ ಸವಾರನ ಬಳಿ ಟ್ರಕ್ ಡ್ರೈವರ್ ಗೆ ನಿಲ್ಲಿಸಲು ಹೇಳುವಂತೆ ಇಬ್ಬರೂ ಬೇಡಿಕೊಂಡಿದ್ದಾರೆ.

ಇವರ ಪರಿಸ್ಥಿತಿ ನೋಡಿ ಗಾಬರಿಯಾದ ಬೈಕ್ ಸವಾರ ಹೇಗಾದರೂ ಮಾಡಿ ಆ ಟ್ರಕ್ ನ್ನು ಓವರ್ ಟೇಕ್ ಮಾಡಿ ನಿಲ್ಲಿಸಿ ಇಬ್ಬರ ಪ್ರಾಣ ಉಳಿಸಿದ್ದಾನೆ. ಟ್ರಕ್ ನಿಲ್ಲಿಸಿದ ಬಳಿಕ ಜನರು ಗುಂಪು ಸೇರಿದ್ದು ಎಲ್ಲರೂ ಸೇರಿಕೊಂಡು ಟ್ರಕ್ ಡ್ರೈವರ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇದೀಗ ಪೊಲೀಸರು ಟ್ರಕ್ ಡ್ರೈವರ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಬೈಕ್ ಸಮೇತ ಸಿಲುಕಿಕೊಂಡಿದ್ದ ಜಾಕಿರ್ ಹಾಗೂ ಆತನ ಸ್ನೇಹಿತನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Rajastan: ನಿದ್ರಾಜನಕ ಔಷಧಿ ನೀಡಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೇಲೆ ರೇಪ್‌

ಕರ್ನಾಟಕದ ಮರ್ಯಾದೆ ಹಾಳು ಮಾಡಿದ್ದೀರಿ: ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಸೋಮಣ್ಣ ವಾಗ್ದಾಳಿ

ಹನಿಮೂನ್​ಗೆ ಹೋದ ನವಜೋಡಿ ನಾಪತ್ತೆ: ಕಮರಿನಲ್ಲಿ ಗಂಡನ ಶವ ಪತ್ತೆ, ಪತ್ನಿಗಾಗಿ ಮುಂದುವರಿದ ಹುಡುಕಾಟ

ಅರಾಂಬೈ ಬಂಧನ ಬೆನ್ನಲ್ಲೆ ಮಣಿಪುರದಲ್ಲಿ ಹಿಂಸಾಚಾರ: ಹಲವೆಡೆ ಕರ್ಫ್ಯೂ ಜಾರಿ, ಇಂಟರ್ನೆಟ್ ಸ್ಥಗಿತ

Karnataka weather: ರಾಜ್ಯದಲ್ಲಿ ಚುರುಕುಗೊಂಡ ಮುಂಗಾರು: ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಮುಂದಿನ ಸುದ್ದಿ
Show comments