Webdunia - Bharat's app for daily news and videos

Install App

ವಾಮಾಚಾರಕ್ಕೆ ಒಳಗಾಗಿ ಮಕ್ಕಳನ್ನೇ ಕೊಂದ ತಾಯಿ!

Webdunia
ಶನಿವಾರ, 24 ಫೆಬ್ರವರಿ 2018 (12:19 IST)
ನವದೆಹಲಿ: ವಾಮಾಚಾರದಿಂದ ಪ್ರಭಾವಿತಗೊಂಡ ಮಹಿಳೆಯೊಬ್ಬರು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಉಸಿರುಗಟ್ಟಿಸಿ
 
ಸಾಯಿಸಿರುವ ಘಟನೆಯೊಂದು  ಮೋತಿ ನಗರದಲ್ಲಿ ನಡೆದಿದೆ. ಆರುವರ್ಷದ ನಂದಿನಿ ಹಾಗೂ ಆರು ತಿಂಗಳ ಆಕಾಂಕ್ಷ ಕೊಲೆಯಾದ ಮಕ್ಕಳು.


ಪೊಲೀಸರು ಆರೋಪಿ ಸುಮನಾ ಅವರನ್ನು ಶಹದಾರದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಮಾನಸಿಕ ಅಸ್ವಸ್ಥೆಯಾಗಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.


ಸುಮನಾ ಅವರು ಇತ್ತೀಚೆಗೆ ತಾಂತ್ರಿಕರೊಬ್ಬರ ಬಳಿ ಹೋಗಿ ಬಂದ ನಂತರ ಆಕೆಯ ವರ್ತನೆ ತುಂಬ ವಿಚಿತ್ರವಾಗಿದೆ. ಆಕೆ ವಾಮಾಚಾರದ ಪ್ರಭಾವಕ್ಕೆ ಒಳಗಾಗಿ ಮಕ್ಕಳನ್ನು ಸಾಯಿಸಿರಬೇಕು. ಆಕೆಯ ವರ್ತನೆ ಭೀತಿ ಹುಟ್ಟಿಸುತ್ತಿದೆ. ಅನೇಕ ಸಾರಿ ನನಗೆ ಹೊಡೆದಿದ್ದಾಳೆ ಎಂದು ಪತಿ ಹೇಳಿದ್ದಾರೆ.


ತನಿಖೆ ಸಮಯದಲ್ಲಿ ಆರೋಪಿ ಒಂದು ಕ್ಷಣ ಆಘಾತಗೊಂಡಂತೆ ವರ್ತಿಸಿದರೆ, ಮತ್ತೊಮ್ಮೆ ಬೇರೆಯೇ ವರ್ತನೆಯನ್ನು ತೋರಿಸುತ್ತಿದ್ದಾರೆ. ಮಕ್ಕಳನ್ನು ಸಾಯಿಸಿದ ತಪ್ಪಿತಸ್ಥ ಭಾವನೆಯೂ  ಆಕೆಯಲ್ಲಿ ಕಾಣಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments