Publish Date: Wed, 27 Oct 2021 (10:41 IST)
Updated Date: Wed, 27 Oct 2021 (10:43 IST)
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಯೋಧ್ಯೆ ಪ್ರವಾಸದಲ್ಲಿರುವ ಬಗ್ಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿ ಸಿಎಂ ಸೇರಿದಂತೆ ವಿರೋಧ ಪಕ್ಷದ ನಾಯಕರು ಇಷ್ಟು ದಿನ ಇಫ್ತಾರ್ ಕೂಟಗಳನ್ನು ನಡೆಸಲು ಪರಸ್ಪರ ಪೈಪೋಟಿ ನಡೆಸುತ್ತಿದ್ರು. ಆದ್ರೆ ಈಗ ಚುನಾವಣೆಗೂ ಮುನ್ನ ರಾಮನನ್ನ ಸ್ಮರಣೆ ಮಾಡ್ತಿವೆ ಅಂತ ಲೇವಡಿ ಮಾಡಿದ್ದಾರೆ. ಸಿಎಂ ಕೇಜ್ರಿವಾಲ್, ಅಯೋಧ್ಯೆ ಸೇರಿದಂತೆ ದೇಶದ ಇತರ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ದೆಹಲಿಯ ಜನರಿಗೆ ಉಚಿತ ತೀರ್ಥಯಾತ್ರೆಯನ್ನು ಘೋಷಿಸಿರುವ ಬಗ್ಗೆ ಪ್ರಸ್ತಾಪಿಸಿದ ಸಿಎಂ ಯೋಗಿ, ಕೊರೊನಾ ಲಾಕ್ಡೌನ್ ಸಮಯದಲ್ಲಿ ಯುಪಿ ಮತ್ತು ಬಿಹಾರದ ವಲಸೆ ಕಾರ್ಮಿಕರನ್ನ ಕೇಜ್ರಿವಾಲ್ ತಮ್ಮ ರಾಜ್ಯದಿಂದ ತಾವೇ ಓಡಿಸಿದ್ರು. ಇಂತ ಸಿಎಂ ಈಗ ಉಚಿತ ತೀರ್ಥಯಾತ್ರೆ ಹೇಗೆ ಘೋಷಿಸ್ತಾರೆ ಅಂತ ಪ್ರಶ್ನೆ ಮಾಡಿದ್ರು.