Select Your Language

Notifications

webdunia
webdunia
webdunia
webdunia

ವಕ್ಫ್ ತಿದ್ದುಪಡಿ ಮಾಡ್ತಿರೋದು ಮುಸ್ಲಿಮರ ಆಸ್ತಿ ಹೊಡೆಯಲು: ಒವೈಸಿ

Asaduddin Owaisi

Krishnaveni K

ಹೈದರಾಬಾದ್ , ಸೋಮವಾರ, 17 ಮಾರ್ಚ್ 2025 (17:16 IST)
ಹೈದರಾಬಾದ್: ವಕ್ಫ್ ತಿದ್ದುಪಡಿ ಕಾಯ್ದೆ ನೆಪದಲ್ಲಿ ಕೇಂದ್ರ ಸರ್ಕಾರ ಮುಸ್ಲಿಮರ ಆಸ್ತಿ ಹೊಡೆಯಲು ಹುನ್ನಾರ ನಡೆಸಿದೆ ಎಂದು ಎಐಎಂಐಎಂ ಪಕ್ಷದ ನಾಯಕ, ಸಂಸದ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಮಂಡಳಿ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಮಸೂದೆ ವಕ್ಫ್ ಆಸ್ತಿಯನ್ನು ಉಳಿಸುವುದಕ್ಕೆ ಅಲ್ಲ, ಕಬಳಿಸುವುದಕ್ಕೆ. ಅತಿಕ್ರಮಣಕಾರರನ್ನು ಕೊನೆಗೊಳಿಸುವುದಕ್ಕೆ ಅಲ್ಲ, ವಕ್ಫ್ ಕೊನೆಗೊಳಿಸಲು ಮಾಡಲಾಗುತ್ತಿದೆ. ಮುಸ್ಲಿಮರಿಂದ ಸ್ಮಶಾನಗಳು, ದರ್ಗಾಗಳನ್ನು ಕಸಿದುಕೊಳ್ಳುವುದಕ್ಕೆ ಮಸೂದೆ ತರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಒಂದು ವೇಳೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಕಾಯ್ದೆಯನ್ನು ಬೆಂಬಲಿಸಿದರೆ ಜನ ಜೀವನ ಪರ್ಯಂತ ನೆನಪಿಟ್ಟುಕೊಂಡು ಪಾಠ ಕಲಿಸುತ್ತಾರೆ ಎಂದು ಒವೈಸಿ ಎಚ್ಚರಿಕೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪ್ರತೀ ಬೂತ್ ನಲ್ಲೂ ಬಿಜೆಪಿ, ಜೆಡಿಎಸ್ ಸೋಲಿಸಬೇಕು: ಡಿಕೆ ಶಿವಕುಮಾರ್