Select Your Language

Notifications

webdunia
webdunia
webdunia
webdunia

ಪ್ರಿಯತಮನಿಂದಲೇ ಕೊಲೆಯಾದ ಯುವತಿ

ಪ್ರಿಯತಮನಿಂದಲೇ ಕೊಲೆಯಾದ ಯುವತಿ
orissa , ಬುಧವಾರ, 1 ನವೆಂಬರ್ 2023 (11:08 IST)
ಪ್ರಿಯತಮನಿಂದಲೇ ಕೊಲೆಯಾದ ಯುವತಿ. ಯುಧಿಸ್ಠಿರ್ ಕೊಲೆ ಮಾಡಿದ ಆರೋಪಿ. ಆರೋಪಿ ಯುಧಿಸ್ಠಿರ್ ಪ್ರೇಯಸಿಯ ಮನೆ ಸಮೀಪದ ಏರಿಯಾದಲ್ಲಿ ವಾಸಿಸುತ್ತಿದ್ದು, ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಆಕೆಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು.ಇದರಿಂದ ಕೋಪಗೊಂಡಿದ್ದ ಆರೋಪಿ ಯುಧಿಸ್ಠಿರ್ ಭುವನೇಶ್ವರ ಹೊರವಲಯದಲ್ಲಿರುವ ಚಂದಕ ಅರಣ್ಯ ನೋಡಲು ಕರೆದುಕೊಂಡು ಹೋಗಿ ಆಕೆಯ ಗಂಟಲನ್ನು ಸೀಳಿ ತಲೆಯನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ.
 
ಪ್ರೀತಿಸಿದವನ ಬಿಟ್ಟು ಬೇರೆಯವರ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದಕ್ಕೆ ಕೋಪಗೊಂಡ ಪ್ರಿಯತಮ ಪ್ರೇಯಸಿಯ ತಲೆ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.
 
ಸಸ್ಮಿತಾ ಬಿಸ್ವಾಲ್ ನಾಪತ್ತೆಯಾಗಿದ್ದು, ಆಕೆಯ ಕುಟುಂಬದವರು ಪೊಲೀಸರಿಗೆ ನಾಪತ್ತೆಯ ದೂರು ನೀಡಿದ್ದರು. ತಲೆ ಇಲ್ಲದ ಯುವತಿಯ ದೇಹವೊಂದು ಭುವನೇಶ್ವರ ಹೊರವಲಯದಲ್ಲಿರುವ ಚಂದಕ ಅರಣ್ಯ ವಿಭಾಗದಲ್ಲಿ ಪತ್ತೆಯಾಗಿದ್ದು, ತನಿಖೆಯ ವೇಳೆ ಮೃತ ಯುವತಿ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ  ಪ್ರಿಯತಮ ಯುಧಿಸ್ಠಿರ್ ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯಾಂಸ ಬಾಯಿಬಿಟ್ಟಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಣಯ ಕ್ರಿಯೆಯಲ್ಲಿ ತೊಡಗಿದ್ದ ಆತ ಏನು ಮಾಡಿದ ಗೊತ್ತೆ?