Select Your Language

Notifications

webdunia
webdunia
webdunia
webdunia

ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಗುವಿಗೆ ನೌಕರಿ ಆಫರ್‌

ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಮಗುವಿಗೆ ನೌಕರಿ ಆಫರ್‌
ರಾಯ್ಪುರ , ಶುಕ್ರವಾರ, 8 ಜುಲೈ 2022 (10:58 IST)
ರಾಯ್ಪುರ : ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ 10 ತಿಂಗಳ ಹೆಣ್ಣು ಮಗುವಿಗೆ ರೈಲ್ವೆ ಇಲಾಖೆಯು ಅನುಕಂಪ ನೌಕರಿ ಆಫರ್ ನೀಡಿದೆ.

ಛತ್ತೀಸಗಢದಲ್ಲಿ ಸಂಭವಿಸಿದ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವಿಗೀಡಾದರು. ಅವರ 10 ತಿಂಗಳ ಮಗುವಿಗೆ ನೌಕರಿ ಆಫರ್ ನೀಡಿದೆ. ಆಕೆ 18 ವರ್ಷ ವಯಸ್ಸಿನ ನಂತರ ರಾಷ್ಟ್ರೀಯ ಸಾರಿಗೆಯಲ್ಲಿ ಕೆಲಸ ಮಾಡಬಹುದು.

ಅನುಕಂಪದ ಆಧಾರದ ಮೇಲೆ ಈ ವಯಸ್ಸಿನ ಮಗುವಿಗೆ ಇಂತಹ ಆಫರ್ ನೀಡಿರುವುದು ಬಹುಶಃ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಜುಲೈ 4 ರಂದು, ರಾಯ್ಪುರ ರೈಲ್ವೆ ವಿಭಾಗದ ಆಗ್ನೇಯ ಕೇಂದ್ರ ರೈಲ್ವೆಯ ಸಿಬ್ಬಂದಿ ಇಲಾಖೆಯಲ್ಲಿ 10 ತಿಂಗಳ ಹೆಣ್ಣು ಮಗುವಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿಗಾಗಿ ನೋಂದಾಯಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು!