ಯಾರು ಅಡುಗೆ ಮಾಡಬೇಕು? ಬಾಯ್‌ಫ್ರೆಂಡ್‌ನನ್ನು ಹತ್ಯೆ ಮಾಡಿದ ಯುವತಿ

Webdunia
ಸೋಮವಾರ, 21 ಆಗಸ್ಟ್ 2017 (15:10 IST)
ರಾತ್ರಿಯ ಅಡುಗೆ ಯಾರು ಮಾಡುತ್ತಾರೆ ಎನ್ನುವ ವಾದ ವಿವಾದ ವಿಕೋಪಕ್ಕೆ ತೆರಳಿದಾಗ, ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ನನ್ನು ಹತ್ಯೆಗೈದ ಹೃದಯವಿದ್ರಾವಕ ಘಟನೆ ಉತ್ತಮ ನಗರದಲ್ಲಿ ನಡೆದಿದೆ.
28 ವರ್ಷ ವಯಸ್ಸಿನ ಯುವತಿ ಎಲ್ವಿ ಉಜುಮ್ಮಾ, ತನ್ನ ನೈಜೇರಿಯಾ ಬಾಯ್‌ಫ್ರೆಂಡ್ ಎಜು ಎಂಬಾತನನ್ನು ಚಾಕುನಿಂದ ಹಲವು ಬಾರಿ ತಿವಿದು ಹತ್ಯೆ ಮಾಡಿದ್ದಾಳೆ. ಘಟನೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
 
ಉಜುಮ್ಮ ಅವರು ಮಧ್ಯಾಹ್ನ ತನ್ನ ಮನೆಗೆ ಬರುವಂತೆ ಎಜುಗೆ ಆಹ್ವಾನಿಸಿದ್ದರು. ಆದರೆ, ಎಜು ಮನೆಗೆ ಬಂದ ಕೆಲ ಸಮಯದಲ್ಲಿಯೇ ಇಬ್ಬರ ನಡುವೆ ವಾದ ಆರಂಭವಾಗಿದೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ನೆರೆಯವರು ಮಧ್ಯಪ್ರವೇಶಿಸಿದ ಬಳಿಕ ಇಬ್ಬರೂ ಸಮಾಧಾನಗೊಂಡಿದ್ದರು. 
 
ಆದಾಗ್ಯೂ, ನೆರೆಯವರು ಹೊರಹೋದ ನಂತರ ಮತ್ತೆ ವಾದ ಆರಂಭವಾಯಿತು. ಯಾರು ಅಡುಗೆ ಮಾಡಬೇಕು ಎನ್ನುವ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿ ವಿಕೋಪಕ್ಕೆ ತಲುಪಿದೆ.
 
ಎಲ್ವಿ ಉಜ್ಮಾ, ಅಡಿಗೆ ಮನೆಯಿಂದ ಚಾಕು ತಂದು ಬಾಯ್‌ಫ್ರೆಂಡ್‌ನನ್ನು ಹೆದರಿಸಲು ಪ್ರಯತ್ನಿಸಿದ್ದಾಳೆ. ಆದರೆ, ಎಜು ಮತ್ತೆ ದಾಳಿ ಮಾಡಲು ಯತ್ನಿಸಿದಾಗ, ಕೋಪಗೊಂಡ ಆಕೆ ತನ್ನ ಕೈಯಲ್ಲಿದ್ದ ಚಾಕುವಿನಿಂದ ಹಲವಾರು ಬಾರಿ ಇರಿದಿದ್ದಾಳೆ. ನಂತರ ತನ್ನ ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ.  ಸುಮಾರು ಅರ್ಧ ಗಂಟೆಯ ನಂತರ ಹೊರಬಂದು ನೋಡಿದಾಗ ತನ್ನ ಬಾಯ್‌ಫ್ರೆಂಡ್‌ ರಕ್ತದ ಮಡುವಿನಲ್ಲಿರುವುದು ಕಂಡು ಆಘಾತಗೊಂಡು ತಮ್ಮ ಗೆಳಯರಿಗೆ ಕರೆ ಮಾಡಿದ್ದಾಳೆ.
 
ಚಾಕುವಿನಿಂದ ಇರಿತಕ್ಕೊಳಗಾದ ಎಜುನನ್ನು ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗಿದೆ. ಆದರೆ, ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments