11 years for Modi Govt: ಏನೂ ಮಾಡಿಲ್ಲ ಪ್ರಚಾರದಿಂದಲೇ ಬದುಕಿರೋದು ಎಂದ ಸಿದ್ದರಾಮಯ್ಯ

Krishnaveni K
ಸೋಮವಾರ, 9 ಜೂನ್ 2025 (11:58 IST)
ಬೆಂಗಳೂರು: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ 11 ವರ್ಷವಾಗಿದೆ. ಈ ಬಗ್ಗೆ ಮಾಧ್ಯಮಗಳು ಇಂದು ಸಿಎಂ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಕೇಳಿದಾಗ ಅವರು ಕೇವಲ ಪ್ರಚಾರದಿಂದಲೇ ಬದುಕಿರೋದು, ಬೇರೆ ಏನೂ ಮಾಡಿಲ್ಲ ಎಂದಿದ್ದಾರೆ.

ಮೋದಿ ಸರ್ಕಾರದ ಬಗ್ಗೆ ನೀವು ಏನು ಹೇಳ್ತೀರಿ, ಎಂದರೆ ನಾನೇನು ಹೇಳಬೇಕು ಇದರ ಬಗ್ಗೆ ಎಂದ ಸಿದ್ದರಾಮಯ್ಯ ಬಳಿಕ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಅದಕ್ಕೆ ನಾನೇನು ಹೇಳ್ಳಿ? ಮೋದಿ ಇದ್ದಾರಲ್ಲಾ ಅವರು ಪ್ರಚಾರದಿಂದ ಬದುಕಿರೋದು. ಬರೀ ಪ್ರಚಾರ. ನೋಟು ನಿಷೇಧ ಮಾಡಿದ್ರು ಏನಾಯ್ತು? ಯಾರಿಗೆ ಅನುಕೂಲ ಆಯ್ತು? ಅಚ್ಚಾ ದಿನ್ ಆಯೇಗಾ ಎಂದ್ರು ಏನಾಯ್ತು? ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡ್ತೀವಿ ಎಂದವ್ರು ಏನಾಯ್ತಪ್ಪಾ? ಆಮೇಲೆ ರೈತರ ಸಮಸ್ಯೆ ಬಗೆಹರಿಸ್ತೀವಿ ಎಂದ್ರು ಏನಾಯ್ತು? ರೈತರು ಯಾಕೆ ಚಳವಳಿ ಮಾಡಿದ್ರು ಒಂದು ವರ್ಷ. ಅವರು ಏನು ಹೇಳಿದ್ರೂ ಮೇಜರ್ ಆಗಿ ಒಂದನ್ನೂ ಮಾಡಿಲ್ಲ. 11 ವರ್ಷ ತುಂಬ್ಸಿದ್ದಾರೆ ಅಷ್ಟೇ. ಮೀಡಿಯಾದವರು ಅವರಿಗೆ ಹೆಚ್ಚು ಪ್ರಚಾರ ಕೊಡ್ತಾರೆ. ಸುಳ್ಳು ವಿಚಾರಗಳನ್ನು ಹೇಳುತ್ತಾರೆ. ನಾವು ಗ್ಯಾರಂಟಿ ಯೋಜನೆ ಮಾಡಿದಾಗ ಆಗಲ್ಲ ದಿವಾಳಿಯಾಗುತ್ತದೆ ಎಂದ್ರು. ಆಮೇಲೆ ಅವರೇ ಅದನ್ನೇ ಅವರು ಕಾಪಿ ಮಾಡಿದ್ರು. ಆಮೇಲೆ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ತೆರಿಗೆ ಹಂಚಿಕೆಯಲ್ಲಿ 50% ಸಿಗಬೇಕು ಎಂದ್ರು. ಇವರೇ ಪ್ರಧಾನಿಯಾದಾಗ ಏನು ಮಾಡಿದ್ರು? ಮಾಡಿಲ್ಲ. ಅದನ್ನೆಲ್ಲಾ ನೀವು ಏನೂ ಹೇಳಲ್ಲ. ನಿರ್ಮಲಾ ಸೀತಾರಾಮನ್ ಶಿಫಾರಸ್ಸು ಮಾಡಿದ ಹಣ ಕೊಟ್ರಾ? ಇದೆಲ್ಲಾ ಮೇಜರ್ ಅಲ್ವಾ? ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಬಿಜೆಪಿಯವರು ಎಲ್ಲಾ ಕೇಳಿ ಎಂದರೆ ಸುಳ್ಳು ಹೇಳಿ ಇಲ್ಲಿ ಅಪಪ್ರಚಾರ ಮಾಡ್ತಿದ್ದಾರೆ’ ಎಂದಿದ್ದಾರೆ. ಮೋದಿ ಸರ್ಕಾರಕ್ಕೆ ಎಷ್ಟು ಮಾರ್ಕ್ ಕೊಡ್ತೀರಿ ಎಂದು ಕೇಳಿದ್ದಕ್ಕೆ ‘ಜೀರೋ ಮಾರ್ಕ್ ಕೊಡ್ತೀನಿ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಸಿದ್ದರಾಮಯ್ಯ ಮಹತ್ವದ ಘೋಷಣೆ

ಡಿಕೆ ಶಿವಕುಮಾರ್ ಸಿಎಂ ಸ್ಥಾನ ಕೊಡಬೇಕಾ: ಡಿಕೆಶಿ ಭವಿಷ್ಯದ ಅಂತಿಮ ನಿರ್ಧಾರ ಯಾರದ್ದು ಗೊತ್ತಾ

Arecanut Ptice: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸಿಎಂ ಕುರ್ಚಿ ಪಡೆಯಲು ಡಿಕೆ ಶಿವಕುಮಾರ್ ಬಣದ ಮತ್ತೊಂದು ಪವರ್ ಫುಲ್ ಐಡಿಯಾ

ಮುಂದಿನ ಸುದ್ದಿ
Show comments