Webdunia - Bharat's app for daily news and videos

Install App

‘ನಮ್ದು ಮೋದಿ ಸರ್ಕಾರ, ರಾಜೀವ್ ಸರ್ಕಾರ ಅಲ್ಲಪ್ಪಾ..!’

Webdunia
ಬುಧವಾರ, 23 ಆಗಸ್ಟ್ 2017 (10:49 IST)
ನವದೆಹಲಿ: ತ್ರಿವಳಿ ತಲಾಖ್ ನಿಷೇಧ ಮಾಡಿರುವ ಸುಪ್ರೀಂಕೋರ್ಟ್ ನಿರ್ಧಾರವನ್ನು ಆಡಳಿತಾರೂಢ ಬಿಜೆಪಿ ಮುಕ್ತ ಕಂಠದಿಂದ ಶ್ಲಾಘಿಸಿದೆ.

 
ಈ ಬಗ್ಗೆ ಮಾತನಾಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ‘ನನಗೆ ನರೇಂದ್ರ ಮೋದಿಯವರ ಬಗ್ಗೆ  ಹೆಮ್ಮೆಯಿದೆ. ಅವರು ತ್ರಿವಳಿ ತಲಾಖ್ ನಿಂದ ನೊಂದ ಮಹಿಳೆಯರ ಪರವಾಗಿ ನಿಂತರು. ಇದು ನರೇಂದ್ರ ಮೋದಿ ಸರ್ಕಾರ, ರಾಜೀವ್ ಗಾಂಧಿ ಸರ್ಕಾರವಲ್ಲ’ ಎಂದು ಕಾಂಗ್ರೆಸ್ ಗೆ ಟಾಂಗ್ ಕೊಟ್ಟಿದ್ದಾರೆ.

1985 ರಲ್ಲಿ ರಾಜೀವ್ ಗಾಂಧಿ ಸರ್ಕಾರ ಮುಸ್ಲಿಂ ಧರ್ಮಗುರುಗಳ ಒತ್ತಡಕ್ಕೆ ಮಣಿದು ಶಾ ಬನೋ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿದ ರಾಜೀವ್ ಗಾಂಧಿ ಸರ್ಕಾರದ ನಿರ್ಧಾರವನ್ನು ರವಿಶಂಕರ್ ವ್ಯಂಗ್ಯವಾಗಿ ಪ್ರಸ್ತಾಪಿಸಿದ್ದಾರೆ.

ಆ ಪ್ರಕರಣದಲ್ಲಿ ವಿಚ್ಛೇದನಕ್ಕೊಳಗಾದ ಶಾ ಬನೋ ಎಂಬ ಮಹಿಳೆ ತನ್ನ ಗಂಡನಿಂದ ಮಾಸಿಕ ಜೀವನಾಂಶ ಕೊಡಿಸಬೇಕೆಂದು ಕೋರ್ಟ್ ಮೊರೆ ಹೋಗಿದ್ದಳು. ಇದಕ್ಕೆ ಸ್ಪಂದಿಸಿದ ಸುಪ್ರೀಂ ಕೋರ್ಟ್ ಮುಸ್ಲಿಂ ಕಾನೂನುಗಳನ್ನು ಧಿಕ್ಕರಿಸಿ ಮಾನವೀಯ ಆಧಾರದಲ್ಲಿ ಆಕೆಗೆ ಮಾಸಿಕ 500 ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು.

ಆದರೆ ಇದು ಮುಸ್ಲಿಂ ವೈಯಕ್ತಿಕ ಕಾನೂನಿಗೆ ವಿರುದ್ಧವಾದುದು ಎಂದು ಕೆಲವು ಮುಸ್ಲಿಂ ಧರ್ಮ ಗುರುಗಳು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮೇಲೆ ಒತ್ತಡ ತಂದು ತೀರ್ಪನ್ನು ಬುಡಮೇಲು ಮಾಡಿದ್ದರು.

ಇದನ್ನೂ ಓದಿ.. ತ್ರಿವಳಿ ತಲಾಖ್ ನಿಷೇಧ ಹೊಗಳಿದ ಕ್ರಿಕೆಟಿಗನಿಗೆ ತರಾಟೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತೀಯ ಮುಸ್ಲಿಮರು ಮತ್ತು ಹಿಂದೂಗಳು ನಡುವೆ ಬೆಂಕಿ ಹೊತ್ತಿಸಲು ಪಾಕ್‌ನಿಂದ ಪ್ರಯತ್ನ: ಅಸಾದುದ್ದೀನ್ ಓವೈಸಿ

ತಕ್ಷಣದ ಕದನ ವಿರಾಮಕ್ಕೆ ಭಾರತ, ಪಾಕಿಸ್ತಾನ ಒಪ್ಪಿಗೆ: ಮಹತ್ವದ ಪೋಸ್ಟ್ ಹಂಚಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ರಾಜ್ಯದಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ

ಟಿವಿ ಕಾರ್ಯಕ್ರಮಗಳಲ್ಲಿ ಸೈರನ್ ಮೊಳಗಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ

Operation Sindoor: ಬೆಟ್ಟಿಂಗ್ ವೇಳೆ ಪಾಕಿಸ್ತಾನ ಪರ ಕೂಗಿದವ ಅರೆಸ್ಟ್‌, ಆಗಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments