Select Your Language

Notifications

webdunia
webdunia
webdunia
webdunia

‘ಬಿಜೆಪಿ ಸೇರಲು 1 ಕೋಟಿ ರೂ. ಆಮಿಷ ಬಂದಿತ್ತು’

‘ಬಿಜೆಪಿ ಸೇರಲು 1 ಕೋಟಿ ರೂ. ಆಮಿಷ ಬಂದಿತ್ತು’
ಅಹಮ್ಮದಾಬಾದ್ , ಸೋಮವಾರ, 23 ಅಕ್ಟೋಬರ್ 2017 (10:24 IST)
ಅಹಮ್ಮದಾಬಾದ್: ಬಿಜೆಪಿ ಸೇರಲು 1 ಕೋಟಿ ರೂ. ಆಮಿಷ ಬಂದಿತ್ತು ಎಂದು ಗುಜರಾತ್ ನ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಆಪ್ತ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.

 
ಉತ್ತರ ಗುಜರಾತ್ ನ ಪಟೇಲ್ ಸಮುದಾಯದ ನಾಯಕ ನರೇಂದ್ರ ಪಟೇಲ್ ನಗದು ಸಮೇತ 1 ಕೋಟಿ ರೂ. ಗಳನ್ನು ಪ್ರದರ್ಶಿಸಿದ್ದಾರೆ.  ಹಾರ್ದಿಕ್ ಪಟೇಲ್ ಅವರ ಹಲವು ಆಪ್ತರು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ನರೇಂದ್ರ ಪಟೇಲ್ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಹಾರ್ದಿಕ್ ಪಟೇಲ್ ರ ಇನ್ನೊಬ್ಬ ಆಪ್ತ ವರುಣ್ ಪಟೇಲ್ ಮೂಲಕ ಬಿಜೆಪಿ 1 ಕೋಟಿ ರೂ. ಆಫರ್ ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಇದನ್ನು ತಳ್ಳಿ ಹಾಕಿದ್ದು, ಇದೆಲ್ಲಾ ಕಾಂಗ್ರೆಸ್ ನ ಕುತಂತ್ರ ಎಂದಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯೋಗೀಶ್ವರ್ ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿ