Select Your Language

Notifications

webdunia
webdunia
webdunia
Tuesday, 15 April 2025
webdunia

ರಾಹುಲ್ ಗಾಂಧಿ ದೇಹವನ್ನು ಉಗ್ರರು ಛಿದ್ರ ಮಾಡಿದ್ದಾರೆಂದ ಕೈ ಮುಖಂಡ

ಖರ್ಗೆ
ಕಲಬುರಗಿ , ಬುಧವಾರ, 17 ಏಪ್ರಿಲ್ 2019 (15:53 IST)
ಚುನಾವಣೆ ಪ್ರಚಾರದ ವೇಳೆ ಕೈ ಪಕ್ಷದ ನಾಯಕರಿಂದ ಎಡವಟ್ಟು ಹೇಳಿಕೆಗಳು ಹೊರಬರುತ್ತಲೇ ಇವೆ.  

ಪ್ರಚಾರದ ವೇಳೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಡವಟ್ಟು ಹೇಳಿಕೆ ನೀಡಿದ್ದಾರೆ. ಉಗ್ರಗಾಮಿಗಳು ರಾಹುಲ್ ಗಾಂಧಿಯ ದೇಹವನ್ನು ಛಿದ್ರ ಛಿದ್ರ ಮಾಡಿದರೆಂದು ಹೇಳಿಕೆ ನೀಡಿದ್ದಾರೆ.
webdunia
ಉಗ್ರರು ಇಂದಿರಾ ಗಾಂಧಿಯನ್ನು ಕೊಂದರು. ನಂತರ ರಾಹುಲ್ ಗಾಂಧಿಯ ದೇಹವನ್ನೂ ಛಿದ್ರ ಛಿದ್ರಗೊಳಿಸಿದರು. ಕಾಂಗ್ರೆಸ್ ನಾಯಕರು ಪಕ್ಷಕ್ಕಾಗಿ ತನ್ನದೇ ಆದ ತ್ಯಾಗ ಮಾಡಿದ್ದಾರೆ ಎಂದರು.

ಕಲಬುರಗಿಯ ಭಾವಸಾರ ಕ್ಷತ್ರೀಯ ಸಮಾಜದ ಸಭಾ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.
ರಾಜೀವ್ ಗಾಂಧಿ ಎನ್ನುವ ಬದಲಿಗೆ ರಾಹುಲ್ ಗಾಂಧಿ ಎಂದ ಖರ್ಗೆ ಆ ಬಳಿಕ ತಮ್ಮ ಮಾತಿನ ತಪ್ಪನ್ನು ಸರಿಪಡಿಸುವ ಗೊಡವೆಗೂ ಹೋಗಲಿಲ್ಲ.




Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಪರ ಪ್ರಚಾರಕ್ಕೆ ಸಾಪ್ಟ್ ವೇರ್ ಉದ್ಯೋಗಿ ಮಾಡಿದ್ದೇನು?