ಮೋದಿ ಖುರ್ಚಿ ಮೇಲೆ ಕರ್ಚೀಫ್ ಹಾಕ್ತಾರಾ?

Webdunia
ಬುಧವಾರ, 3 ಏಪ್ರಿಲ್ 2019 (15:44 IST)
ಕಾಂಗ್ರೆಸ್ ನಲ್ಲೂ ಹಾಗೆ ಆಗಿದೆ. ಅದು ಒಂದು ವಂಶದವರ ಅನುವಂಶಿಕ ಸ್ವತ್ತಾಗಿದೆ. ಹೀಗಂತ ಬಿಜೆಪಿ ಹಿರಿಯ ಮುಖಂಡ ಆರೋಪ ಮಾಡಿದ್ದಾರೆ.

ಅನುವಂಶಿಕ‌ ರಾಜಕಾರಣವನ್ನು ನಾನು ವಿರೋಧಿಸಿಕೊಂಡು ಬಂದಿದ್ದೇನೆ. ಅರ್ಹತೆ ಇದ್ದೋ ಇಲ್ಲದೆಯೋ ತಾವು ಒಂದು ವಂಶದಲ್ಲಿ ಹುಟ್ಟಿದ್ದೇನೆ ಎಂಬ ಒಂದೇ ಕಾರಣಕ್ಕೆ ದೇಶದ ನಾಯಕತ್ವ ವಹಿಸೋದು ಸರಿ ಕಾಣಲ್ಲ. ಅರ್ಹತೆ ಇದ್ದರೆ ಪರವಾಗಿಲ್ಲ. ಆದರೆ ಅರ್ಹತೆ ಇಲ್ಲದೇ ಇದ್ದರೆ? ಕಾಂಗ್ರೆಸ್ ನಲ್ಲೂ ಹಾಗೆ ಆಗಿದೆ. ಅದು ಒಂದು ವಂಶದವರ ಅನುವಂಶಿಕ ಸ್ವತ್ತಾಗಿದೆ. ಹೀಗಂತ ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ಮುಖಂಡ ಎಸ್.ಎಂ.ಕೃಷ್ಣ ಹೇಳಿದ್ದಾರೆ.

ನಾನು ಬಿಜೆಪಿ ಸೇರಲು ಮೂಲ ಕಾರಣ ನರೇಂದ್ರ ಮೋದಿ. ಅವರು ಯಾವ ಪರಿವಾರವನ್ನೂ ಪೋಷಣೆ  ಮಾಡುತ್ತಿಲ್ಲ. ಅವರದ್ದು ಅನುವಂಶಿಕ ರಾಜಕಾರಣ ಅಲ್ಲ. ಗುಜರಾತಿನಿಂದ ಒಬ್ಬರೇ ಬಂದರು. ದೇಶದ ನಾಯಕತ್ವ ವಹಿಸಿಕೊಂಡರು. ಮತ್ತೆ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ. ಖುರ್ಚಿ ಮೇಲೆ ಕರ್ಚೀಫ್ ಹಾಕುವ ಸ್ವಭಾವ ಅವರದ್ದಲ್ಲ. ಹಾಗಾಗಿ ಅವರಿಂದ ಆಕರ್ಷಿತನಾಗಿ ಬಿಜೆಪಿ ಸೇರಿದೆ ಎಂದರು.

ನಾನೇ ಬಿಜೆಪಿಯವರಿಗೆ ನನ್ನ ಸೇವೆ ಬಳಕೆ ಮಾಡಿಕೊಳ್ಳಿ, ಪ್ರಚಾರ ಕಾರ್ಯದಲ್ಲಿ ತೊಡಗುತ್ತೇನೆ ಎಂದು ಮನವಿ ಮಾಡಿಕೊಂಡೆ. ಇಲ್ಲಿ ಯಾರ ಒತ್ತಡವೂ ಇಲ್ಲ. ಹೀಗಂತ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಎಸ್. ಎಂ. ಕೃಷ್ಣ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಷ್ಟ್ರ ರಾಜಧಾನಿಯಲ್ಲಿ ಇಂದು ಎಷ್ಟು ಇಂಡಿಗೋ ವಿಮಾನ ಹಾರಾಟ ರದ್ದು ಗೊತ್ತಾ

Big Shocking: ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣದಲ್ಲಿ ಹೆಚ್ಚಳ

ಬಿಜೆಪಿ ಚುನಾವಣೆಗಾಗಿ, ನಾವು ದೇಶಕ್ಕಾಗಿ: ಪ್ರಿಯಾಂಕಾ ಗಾಂಧಿ ಕಿಡಿ

ಗುಜರಾತ್ ಸರ್ಕಾರ ರೈತರ ಮೇಲೆ ಲಾಠಿ ಚಾರ್ಜ್ ಮಾಡಿದೆ: ಅರವಿಂದ್ ಕೇಜ್ರಿವಾಲ್

ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಸೂರ್ಯಕುಮಾರ್ ಯಾದವ್

ಮುಂದಿನ ಸುದ್ದಿ
Show comments